ಕುಂದಾಪುರ: ಬೈಂದೂರು ಕ್ಷೇತ್ರದ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಸೋಣಿ ಕೆಳಸೋಣಿ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ,ರಸ್ತೆ ಅಭಿವೃದ್ದಿಯಾಗದ ಕಾರಣ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಬ್ಯಾನರ್ನ್ನು ಅಳವಡಿಸಿದ್ದು,ರಸ್ತೆ ಅಭಿವೃದ್ದಿಯಾಗುವವರೆಗೂ ಯಾವುದೆ ರಾಜಿ ಸಂಧಾನಗಳಿಗೆ ಅವಕಾಶವಿರುವುದಿಲ್ಲಾ ಮುಂಬರುವ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ನಾಮಫಲಕವನ್ನು ಹಾಕಿದ್ದಾರೆ.
ಒಂದೂವರೆ ಕಿ.ಮೀ ಕ್ಕೂ ಅಧಿಕ ಉದ್ದವಿರುವ ಮಣ್ಣಿನ ರಸ್ತೆ ಮಳೆಗಾಲದಲ್ಲಿ ಕೇಸರು ಗದ್ದೆಯಂತೆ ರಾಡಿ ಎದ್ದು ಹೋಗಿರುತ್ತದೆ ಕೇಸರು ಮಯವಾದ ರಸ್ತೆಯಲ್ಲಿ ಮಳೆಗಾಲದ 3 ತಿಂಗಳು ಸಂಚಾರ ಮಾಡುವುದೆ ಆ ಭಾಗದ ಜನತೆಗೆ ಸಂಕಷ್ಟವಾಗಿದೆ.
ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಗ್ರಾಮಸ್ಥರು ಶಾಸಕರು ಸೇರಿದಂತೆ ಸ್ಥಳೀಯ ಪಂಚಾಯತಿಗೂ ಸಾಲು ಸಾಲು ಮನವಿಯನ್ನು ಸಲ್ಲಿಸಿದ್ದರು ಇಲ್ಲಿ ತನಕ ರಸ್ತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿಲ್ಲ ಬೇಸತ್ತ ಜನರು ಬ್ಯಾನರ್ ಅಳವಡಿಸಿ ಚುನಾವಣೆಯ ಬಹಿಷ್ಕಾರದ ಕೂಗನ್ನು ಆರಂಭಿಸಿದ್ದಾರೆ.