ಕುಂದಾಪುರ: ದೇವಾಡಿಗ ಸಮುದಾಯ ಭವನದ ಕಟ್ಟಡ ನಿಧಿಗೆ ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಅವರು 5 ಲಕ್ಷ.ರೂ ಅನ್ನು ಧನಸಾಹಯದ ರೂಪದಲ್ಲಿ ಕೊಡುಗೆಯಾಗಿ ನೀಡಿದರು.
ದೇವಾಡಿಗ ಸಮುದಾಯ ಭವನದ ನಿರ್ಮಾಣಕ್ಕೆ ಧನಸಾಹಯವನ್ನು ವಿತರಿಸಿ ಮಾತನಾಡಿದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಸರಕಾರದಿಂದ ಸಾಹಯಧನವನ್ನು ದೊರಕಿಸಿ ಕೊಡುವುದರ ಬಗ್ಗೆ ಪ್ರಯತ್ನಿಸಲಾಗುವುದೆಂದು ಸಂಘದ ಸದಸ್ಯರಿಗೆ ಭರವಸೆಯನ್ನು ನೀಡಿದರು.
ದೇವಾಡಿಗ ಸಮುದಾಯ ಭವನ ನಿರ್ಮಾಣದ ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ದೇವಾಡಿಗ ಹೊಸಾಡು,ಕಟ್ಟಡ ಸಮಿತಿಯ ಕಾರ್ಯದರ್ಶಿ ಮಹಾಲಿಂಗ ದೇವಾಡಿಗ , ಕೋಶಾಧಿಕಾರಿ ರಾಜಶೇಖರ್ ಬೈಂದೂರು,ಕಟ್ಟಡ ಸಮಿತಿಯ ಸಂಚಾಲಕ ಚರಣ್ ಬೈಂದೂರು,ಒಕ್ಕೂಟದ ಮಾಜಿ ಅಧ್ಯಕ್ಷರ ನಾರಾಯಣ ದೇವಾಡಿಗ ಹೊಸಾಡು , ಕಾರ್ಯದರ್ಶಿ ನಾರಾಯಣ ದೇವಾಡಿಗ ಕೋಣೂರು, ಸಮಿತಿಯ ಸದಸ್ಯರಾದ ನಟರಾಜ್ ಬೈಂದೂರು ಹಾಗೂ ನಿತಿನ್ ಬೈಂದೂರು ಉಪಸ್ಥಿತರಿದ್ದರು.