ಕುಂದಾಪುರ: ಜೆಡಿಎಸ್ ಪಕ್ಷದ ವತಿಯಿಂದ ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿರುವ ಮನ್ಸೂರ್ ಇಬ್ರಾಹಿಂ ಮರವಂತೆ ಅವರು ಬುಧವಾರ ಬೈಂದೂರುನಲ್ಲಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರುಗಳಾದ ಶ್ರೀಕಾಂತ್ ಅಡಿಗ, ಸಂದೇಶ ಭಟ್ ಉಪ್ಪುಂದ, ಜಯಶೀಲ ಶೆಟ್ಟಿ, ಮಕ್ಡ್ಯಾಮ್ ಇಸ್ಮಾಹಿಲ್, ರಿಯಾಜ್ ನಾವುಂದ, ಗಿರೀಶ್ ಮರವಂತೆ, ಯಾಸಿನ್ ಉಪ್ಪುಂದ, ವಾಹಬ್ ಇಬ್ರಾಹಿಂ, ಮಾರುತಿ ಕೊಲ್ಲೂರು ಉಪಸ್ಥಿತರಿದ್ದರು.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮನ್ಸೂರ್ ಇಬ್ರಾಹಿಂ ಮರವಂತೆ ಸ್ಪರ್ಧೆ ಮಾಡಿದ್ದರು.