ಕುಂದಾಪುರ: ಬಿಜೆಪಿ ಪಕ್ಷದ ಪ್ರಬಲ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ ಮತ್ತು ಶಂಕರ ಪೂಜಾರಿ ಅವರು ತಮ್ಮ ಕಾರ್ಯಕರ್ತರೊಡನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದರ ಮುಖೇನ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರುಗಳನ್ನು ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಸೆಳೆದುಕೊಳ್ಳಲು ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಪ್ರಮುಖ ಕಾರ್ಯಕರ್ತರ ಪಡೆಯನ್ನು ಕಾಂಗ್ರೆಸ್ ತನ್ನೆಡೆಗೆ ಸೆಳೆದುಕೊಳ್ಳುವುದರ ಮೂಲಕ ಬಿಜೆಪಿ ಪಕ್ಷದ ಜಂಗಾಬಲವನ್ನೆ ಕುಸಿದಿದೆ.
ಬೈಂದೂರು ಕೇಂದ್ರ ಸ್ಥಾನದಲ್ಲಿದ್ದುಕೊಂಡು 30ಕ್ಕೂ ಅಧಿಕ ವರ್ಷಗಳಿಂದ ಪಕ್ಷದ ಶ್ರೇಯಸ್ಸಿಗಾಗಿ ದುಡಿದ ಬಂಟ್ ಸಮುದಾಯದ ಪ್ರಬಲ ನಾಯಕರು,ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಬಿಜೆಪಿ ಪಕ್ಷದ ವತಿಯಿಂದ ಆಯ್ಕೆಯಾಗಿದ್ದ ಬಾಬು ಹೆಗ್ಡೆ ತೆಗ್ಗರ್ಸೆ ಅವರು ಬೈಂದೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು. ಕೇಂದ್ರ ಮಟ್ಟದ ನಾಯಕರುಗಳ ತನಕ ಪ್ರಭಾವ ಬೀರಿದ್ದರು ಬಾಬು ಹೆಗ್ಡೆಗೆ ವಿಧಾನಸಭೆ ಟಿಕೆಟ್ ಕೈ ತಪ್ಪಿ, ಗುರುರಾಜ್ ಗಂಟಿಹೊಳೆ ಅವರ ಪಾಲಾಗಿತ್ತು.
ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡದೆ ಇದ್ದಿದರಿಂದ ಮುನಿಸಿಕೊಂಡಿದ್ದ ಬಾಬು ಹೆಗ್ಡೆ ಅವರು ಪಕ್ಷವನ್ನು ತೊರೆದು ಬೇರೆ ಪಕ್ಷವನ್ನು ಸೇರುವ ಮಾತನ್ನು ಆವಾಗಲೇ ಹೊರಹಾಕಿದ್ದರು.ಕರಾವಳಿ ಭಾಗದ ಬಿಜೆಪಿ ಪಕ್ಷದ ಪ್ರಮುಖ ಮುಖಂಡರುಗಳು, ರಾಜ್ಯ ಮಟ್ಟದ ನಾಯಕರುಗಳು ಬಾಬು ಹೆಗ್ಡೆ ಅವರ ಜತೆ ಹಲವಾರು ಸುತ್ತಿನ ಮಾತುಕೆತೆ ನಡೆಸಿದ್ದರು ಫಲಪ್ರದ ಗೊಂಡಿಲ್ಲ. ನಿರೀಕ್ಷೆ ಅಂತೆ ಬಾಬು ಹೆಗ್ಡೆ ತೇಗರ್ಸೆ ಅವರು ತನ್ನ ಕಾರ್ಯಕರ್ತರೊಡನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ ಕಾಂಸ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದರಿಂದ ಕೆ.ಗೋಪಾಲ ಪೂಜಾರಿ ಅವರಿಗೆ ದೊಡ್ಡ ಮಟ್ಟದಲ್ಲಿ ಲಾಭಾವಾಗುವ ನಿರೀಕ್ಷೆ ಇದೆ.
ಬಾಬು ಹೆಗ್ಡೆ ಸೇರಿದಂತೆ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಸದಾಶಿವ ಪಡುವರಿ ಹಾಗೂ 150 ಕ್ಕೂ ಅಧಿಕ ಕಾರ್ಯಕರ್ತರು ಬೈಂದೂರುನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಎರಡು ತಿಂಗಳ ಹಿಂದೆ ಹಿಂದೂ ಮುಖಂಡ ಪ್ರಕಾಶ್ ತೋಳಾರ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.
ಬಿಜೆಪಿ ಪಕ್ಷದ ಮುಖಂಡರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವುದಕ್ಕೆ ಪ್ರತಿಕ್ರಿಯೇ ನೀಡಿರುವ ಬೈಂದೂರು ಬಿಜೆಪಿ ತತ್ವ ಸಿದ್ದಾಂತದ ಅರ್ಥವನ್ನು ತಿಳಿಯದೆ ಇದ್ದವರು ಪಕ್ಷವನ್ನು ತೊರೆದಿದ್ದರಿಂದ ಯಾವುದೇ ರೀತಿಯ ನಷ್ಟ ಪಕ್ಷಕ್ಕೆ ಆಗುವುದಿಲ್ಲ. ನಮ್ಮ ಪಕ್ಷ ಈಗ ಸ್ವಚ್ಛಗೊಂಡಿದೆ ನಮ್ಮ ಅಭ್ಯರ್ಥಿ ಗಂಟಿಹೊಳೆ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.