ಕುಂದಾಪುರ: ಸಂವಿಧಾನದಡಿಯಲ್ಲಿ ಯಾರೂ ಕೂಡ ರಾಜಕೀಯ ಪಕ್ಷ ಕಟ್ಟಬಹುದು. ಇಂತಹ ಅಲೆಗಳು ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಪಕ್ಷ ಕಟ್ಟಿದ್ದು ಏನಾಗುತ್ತೋ ಕಾದು ನೋಡೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕುಂದಾಪುರದ ತ್ರಾಸಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿಯವರ ನೂತನ ಪಕ್ಷದ ಕುರಿತು ಕೇಳಲಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ವಿಜಯೇಂದ್ರ ಸ್ಪರ್ಧೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕಾರಿಪುರದಲ್ಲಿ ವಿಜಯೇಂದ್ರ ಅವರನ್ನು ಸ್ಪರ್ಧೆಗಿಳಿಸಲು ಕಾರ್ಯಕರ್ತರ ಒಕ್ಕೊರಲಿನ ಮನವಿಯಾಗಿದೆ. ಯಡಿಯೂರಪ್ಪನವರು ತಾನು ಚುನಾವಣೆಗೆ ನಿಲ್ಲುತ್ತಿಲ್ಲ, ವಿಜಯೇಂದ್ರಗೆ ಅವಕಾಶ ನೀಡಲು ವಿನಂತಿಸಿದ್ದಾರೆ. ಆದರೂ ಪಕ್ಷ ಯಾವ ಸಂದರ್ಭ ಯಾರು ಎಲ್ಲಿ ಸ್ಪರ್ಧೆ ಮಾಡಬೇಕೆಂಬ ನಿರ್ಧಾರ ಮಾಡುತ್ತದೆ. ಯಾರಿಗೆ ಜವಬ್ದಾರಿ ನೀಡಬೇಕೆಂಬುದು ಸಂಘಟನೆ ತೀರ್ಮಾನ ಮಾಡುತ್ತದೆ ಎಂದರು..