News Karnataka Kannada
Friday, May 03 2024
ಉಡುಪಿ

ಕುಂದಾಪುರ: ಸಂವಿಧಾನದಡಿಯಲ್ಲಿ ಯಾರೂ ಕೂಡ ರಾಜಕೀಯ ಪಕ್ಷ ಕಟ್ಟಬಹುದು- ಬಿ.ವೈ. ರಾಘವೇಂದ್ರ

Anyone can form a political party under the Constitution: B.Y. Yediyurappa Raghavendra
Photo Credit : News Kannada

ಕುಂದಾಪುರ: ಸಂವಿಧಾನದಡಿಯಲ್ಲಿ ಯಾರೂ ಕೂಡ ರಾಜಕೀಯ ಪಕ್ಷ ಕಟ್ಟಬಹುದು. ಇಂತಹ ಅಲೆಗಳು ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಪಕ್ಷ ಕಟ್ಟಿದ್ದು ಏನಾಗುತ್ತೋ ಕಾದು ನೋಡೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕುಂದಾಪುರದ ತ್ರಾಸಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನ ರೆಡ್ಡಿಯವರ ನೂತನ ಪಕ್ಷದ ಕುರಿತು ಕೇಳಲಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ವಿಜಯೇಂದ್ರ ಸ್ಪರ್ಧೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕಾರಿಪುರದಲ್ಲಿ ವಿಜಯೇಂದ್ರ ಅವರನ್ನು ಸ್ಪರ್ಧೆಗಿಳಿಸಲು ಕಾರ್ಯಕರ್ತರ ಒಕ್ಕೊರಲಿನ ಮನವಿಯಾಗಿದೆ. ಯಡಿಯೂರಪ್ಪನವರು ತಾನು ಚುನಾವಣೆಗೆ ನಿಲ್ಲುತ್ತಿಲ್ಲ, ವಿಜಯೇಂದ್ರಗೆ ಅವಕಾಶ ನೀಡಲು ವಿನಂತಿಸಿದ್ದಾರೆ. ಆದರೂ ಪಕ್ಷ ಯಾವ ಸಂದರ್ಭ ಯಾರು ಎಲ್ಲಿ ಸ್ಪರ್ಧೆ ಮಾಡಬೇಕೆಂಬ ನಿರ್ಧಾರ ಮಾಡುತ್ತದೆ. ಯಾರಿಗೆ ಜವಬ್ದಾರಿ ನೀಡಬೇಕೆಂಬುದು ಸಂಘಟನೆ ತೀರ್ಮಾನ ಮಾಡುತ್ತದೆ ಎಂದರು..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು