News Karnataka Kannada
Friday, May 03 2024
ಉಡುಪಿ

ಕಾರ್ಕಳ: ಸಾಹಿತ್ಯ ಬದುಕು ಕಲಿಸುತ್ತದೆ, ವ್ಯಕ್ತಿತ್ವ ಬೆಳೆಸುತ್ತದೆ- ಡಾ.ಅರುಣ್ ಕುಮಾರ್

Karkala: Literature teaches life, develops personality: Dr Arun Kumar
Photo Credit : News Kannada

ಕಾರ್ಕಳ: ಸಾಹಿತ್ಯ ಬದುಕು ಕಲಿಸುತ್ತದೆ, ವ್ಯಕ್ತಿತ್ವ ಬೆಳೆಸುತ್ತದೆ, ಜೊತೆಗೆ ಮಾಜಮುಖಿಯನ್ನಾಗಿಸುತ್ತದೆ. ಶಿಸ್ತಿನಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದಾಗ ಸಿಗುವ ಫಲ ಜೀವನದಲ್ಲಿ ರಸಭಾವ ತುಂಬುತ್ತದೆ. ಬದುಕಿನುದ್ದಕ್ಕೂ ಮನುಷ್ಯನಾಗುವ ಕಡೆಗೆ ನಮ್ಮನ್ನ ಕರೆದುಕೊಂಡು ಹೋಗುತ್ತದೆ ಎಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಹೇಳಿದರು.

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ವೇದಿಕೆ ಹಾಗೂ ಲಲಿತಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಕಿರಣ್ ಎಂ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾಥಿಗಳು ಓದಿನ ಜೊತೆಗೆ ಸಾಹಿತ್ಯ ಹಾಗೂ ಕಲೆಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು. ಪ್ರಪಂಚದ ಇತಿಹಾಸವನ್ನ ಗಮನಿಸಿದರೆ ರಾಜ್ಯಗಳ ವಿಭಜನೆ ಆದದ್ದು ಭಾಷೆಗಳ ಆಧಾರದಲ್ಲಿ, ಅಂದರೆ ಭಾಷೆ-ಸಾಹಿತ್ಯ ಮನುಷ್ಯರ ಮದ್ಯೆ ಎಷ್ಟು ಹಾಸು ಹೊಕ್ಕಾಗಿದೆ ಎಂದರೆ ಹೊಸ ಹುಟ್ಟು, ಮರು ಹುಟ್ಟು ಹಾಗೂ ಕ್ರಾಂತಿಗಳಿಗೆ ಭಾಷೆಯೇ ಮೂಲ ಎಂದರು.

ಕೃತಿಕಾ, ಸೌಮ್ಯದಾತೆ, ಪ್ರಜ್ಞಾ ಹಾಗೂ ಧನ್ಯ ಪ್ರಾರ್ಥನೆಗೈದರು. ಐಶ್ವರ್ಯ ಸ್ವಾಗತಿಸಿದರು, ಸಾಹಿತ್ಯ ವೇದಿಕೆ ಸಂಚಾಲಕ ಯೋಗೇಶ್ ಡಿ.ಹೆಚ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿನಯ ನಾಥು ನಿರ್ವಹಿಸಿದರು. ಲಲಿತಕಲಾ ಸಂಘದ ಸಂಚಾಲಕ ಗಣೇಶ್, ಎಸ್, ಐಕ್ಯೂಎಸಿ ಸಂಚಾಲಕಿ ಸುಷ್ಮಾರಾವ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು