ಕಾರ್ಕಳ : ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ರವರ 132ನೇ ಜನ್ಮದಿನಾಚರಣೆಯು ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಆಚರಿಸಲಾಯಿತು.
ತಾಲೂಕು ಆಫೀಸ್ ಬಳಿಯಲ್ಲಿ ಇರುವ ಅಂಬೇಡ್ಕರ್ ಮೂರ್ತಿಗೆ ಹೂಹಾರ ಹಾಕಿ, ಪುಷ್ಪಗುಚ್ಛ ಸಮರ್ಪಿಪಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಹಿ ತಿಂಡಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರುಗಳಾದ ಅಣ್ಣಪ್ಪ ನಕ್ರೆ, ಶ್ರೀಧರ ಗೌಡ ರಾಜ್ಯ ರಾಜ್ಯಾಧ್ಯಕ್ಷ ಮಲೆ ಕುಡಿಯರ ಸಂಘ ಗಂಗಾಧರ್ ಗೌಡ ಜಿಲ್ಲಾಧ್ಯಕ್ಷರು ಮಲೆಕುಡಿಯರ ಸಂಘ, ದಲಿತ ಮುಖಂಡರಾದ ಪುವಪ್ಪ ಮಾಸ್ಟರ್, ಕಾರ್ಕಳ ತಾಲೂಕು ದಂಡಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಪುರಸಭಾ ಅಧಿಕಾರಿ, ಪೊಲೀಸ್ ಅಧಿಕಾರಿ, ಪುರಸಭೆ ಪುರಸಭೆ ಅಧ್ಯಕ್ಷೆ ಸುಮ ಕೇಶವ್, ಪ್ರಭಾ, ಸೋಮನಾಥ, ಸೀತಾರಾಮ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.