ಮಂಗಳೂರು: ಕಾಂಗ್ರೆಸ್ ಮುಖಂಡ ಜೆ. ಆರ್. ಲೋಬೊ ಅವರಿಗೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕೈ ಟಿಕೆಟ್ ಖಚಿತಗೊಂಡಿದ್ದು ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ. ಮಂಗಳೂರು ದಕ್ಷಿಣದಿಂದ ವಕೀಲ, ಯುವ ಬಿಲ್ಲವ ಮುಖಂಡ ಆರ್. ಪದ್ಮರಾಜ್ , ಐವನ್ ಡಿಸೋಜ ಅವರು ಟಿಕೆಟ್ಗೆ ತೀವ್ರ ಪೈಪೋಟಿ ನಡೆಸಿದ್ದರು.
ಐವನ್ ಮತ್ತು ಪದ್ಮರಾಜ್ ಅವರು ದೆಹಲಿ ಯಾತ್ರೆ ನಡೆಸಿ ಟಿಕೆಟ್ಗೆ ಲಾಬಿ ನಡೆಸಿದ್ದರು. ಆದರೆ ಕೊನೆಯ ಹಂತದಲ್ಲಿ ಜೆ. ಆರ್. ಲೋಬೊ ಅವರಿಗೆ ಅದೃಷ್ಟ ಒಲಿದಿದೆ. ಅಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಹೈಕಮಾಂಡ್ ಮತ್ತು ಹಿರಿಯ ನಾಯಕರು 15 ದಿನಗಳ ಹಿಂದೆಯೇ ಲೋಬೊ ಅವರಿಗೆ ಸೂಚನೆ ನೀಡಿದ್ದನ್ನು ಗಮನಿಸಬಹುದು.