News Karnataka Kannada
Monday, April 29 2024
ಮಂಗಳೂರು

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಸಂಚಾರ: ವಾಹನ ಸವಾರರಲ್ಲಿ ಭೀತಿ

Wild elephant spotted at Charmadi Ghat, motorists panic
Photo Credit : By Author

ಚಾರ್ಮಾಡಿ: ಚಾರ್ಮಾಡಿ ಘಾಟಿ ಪ್ರದೇಶದ ಅಲ್ಲಲ್ಲಿ ಒಂಟಿ ಸಲಗ ಸಂಚರಿಸುತ್ತಿರುವ ಕುರಿತು ವಾಹನ ಸವಾರರು ತಿಳಿಸಿದ್ದಾರೆ. ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನ ಬಳಿ ಬುಧವಾರ ಸಂಜೆ 7ರ ವೇಳೆಗೆ ಹೆದ್ದಾರಿ ಬದಿ ಕಾಡಾನೆ ಇದ್ದ ಕುರಿತು ತರಕಾರಿ ಸಾಗಾಟ ವಾಹನದವರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 9ಗಂಟೆ ಹೊತ್ತಿಗೆ ಕಾಡಾನೆ 7ನೇ ತಿರುವಿನ ಬಳಿ ವಾಹನ ಸವಾರರಿಗೆ ಕಂಡು ಬಂದಿದೆ. ಘಾಟಿ ರಸ್ತೆ ಬದಿ ಒಂಟಿ ಸಲಗ ಕಂಡುಬಂದಿರುವುದು ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.

ಒಂಟಿ ಸಲಗ ಘಾಟಿ ಪರಿಸರದಲ್ಲಿ ಸಂಚರಿಸುತ್ತಿರುವ ಕುರಿತು ಚಾರ್ಮಾಡಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗೆ ವಾಹನ ಸವಾರರು ಮಾಹಿತಿ ನೀಡಿದ್ದು ಇಲ್ಲಿನ ಸಿಬ್ಬಂದಿ ಘಾಟಿ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾಡಾನೆ ಕಂಡು ಬರದಿದ್ದರೂ ಅದು ಸಂಚರಿಸಿದ ಕುರುಹುಗಳು ಕಂಡುಬಂದಿವೆ.

ಎಚ್ಚರಿಕೆ
ಚಾರ್ಮಾಡಿ ಘಾಟಿ ಪರಿಸರವು ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿ ಹಲವಾರು ವನ್ಯಜೀವಿಗಳು ವಾಸಿಸುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ರಸ್ತೆಯ ಅಲ್ಲಲ್ಲಿ ಆಗಾಗ ಇವು ವಾಹನ ಸವಾರರಿಗೆ ಕಾಣಿಸಿಗುತ್ತವೆ.ಆದರೆ ಇದೀಗ ಹಗಲಿನ ವೇಳೆ ಕಾಡಾನೆ ರಸ್ತೆಯಲ್ಲಿ ಸಂಚರಿಸುವುದು ಕಂಡುಬಂದಿದೆ. ಈ ಕಾರಣದಿಂದ ವಾಹನ ಸವಾರರು ಹೆಚ್ಚಿನ ಮುಂಜಾಗ್ರತೆಯಿಂದ ಘಾಟಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಘಾಟಿ ಪರಿಸರದಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಕಂಡುಬಂದಿದ್ದು, ಈ ವೇಳೆ ಹಲವಾರು ವನ್ಯಮೃಗಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ. ಅಲ್ಲದೆ ಬಿರು ಬೇಸಿಗೆಯ ಪರಿಣಾಮ ಕಾಡುಪ್ರಾಣಿಗಳಿಗೆ ನೀರಿನ ಅಭಾವವು ಇರುವುದರಿಂದ ಇವು ಘಾಟಿಯುವುದಕ್ಕೂ ನೀರು,ಆಹಾರ ಅರಸಿ ಸಂಚರಿಸುತ್ತಿರುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು