ವಾಮಂಜೂರು: 27 ಲಕ್ಷ ರೂ ವೆಚ್ಚದಲ್ಲಿ ವಾಮಂಜೂರಿನ ತಿರುವೈಲ್ ಗ್ರಾಮದಲ್ಲಿರುವ ದ.ಕ ಜಿಲ್ಲಾ ಪಂಚಾಯತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಳ್ಳಲಿರುವ 2 ತರಗತಿ ಕೊಠಡಿಗಳಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಯವರು ಶಿಲಾನ್ಯಾಸಗೈದರು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್ ಈಶ್ವರ್, ದೈಹಿಕ ಶಿಕ್ಷಣ ಪರಿವೀಕ್ಷಕ ರವಿಶಂಕರ್, ಮುಖ್ಯ ಶಿಕ್ಷಕಿ ಜೆನೆಟ್ ಪಿಂಟೋ, ದೈಹಿಕ ಶಿಕ್ಷಕ ಗೋಪಾಲ್, ಸ್ಟ್ಯಾನಿ ಕುಟಿನ್ಹೊ, ದಿನೇಶ್ ಜೆ ಕರ್ಕೇರ, ಉದ್ಯಮಿಗಳಾದ ರಘು ಸಾಲ್ಯಾನ್, ಅನಿಲ್ ರೈ ವಾಮಂಜೂರು, ಸತೀಶ್ ಮೂಡುಜೆಪ್ಪು, ಸಹಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.