ಉಜಿರೆ: ಶ್ರೀ. ಧ. ಮಂ. ಕಾಲೇಜಿನ ಇಬ್ಬರು ಉಪಾಧ್ಯಾಯರ ಬರಹಗಳು ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ಪಠ್ಯ-ಪುಸ್ತಕಕ್ಕೆ ಆಯ್ಕೆಯಾಗಿದೆ.
ಪದವಿ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಡಾ.ಎ.ಜಯಕುಮಾರ್ ಶೆಟ್ಟಿಯ ‘ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಗಟ್ಟಿಗೊಳಿಸಬೇಕಿದೆ’ ಎಂಬ ಬರಹವು ಪದವಿಯ ಕಲಾವಿಭಾಗದ ಪಠ್ಯ ಪುಸ್ತಕ್ಕೆ ಸ್ವೀಕೃತಗೊಂಡಿದೆ. ಈ ಬರಹವು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಸ್ನಾತಕೊತ್ತರ ವಿಭಾಗದ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಕೆ.ಪದ್ಮನಾಭ್ ರವರ ‘ಅಹಿಂಸೆ: ಎಂದಿಗೂ ಬತ್ತದ ನದಿಯ ನಿನಾದ’ ಎಂಬ ಬರಹವು ಕನ್ನಡ ವಿಭಾಗದ ಪಠ್ಯಕ್ಕೆ ಆಯ್ಕೆಯಾಗಿದೆ.
ಈ ಮೊದಲು ಕೂಡ ಇಬ್ಬರು ಪ್ರಾಧ್ಯಾಕಪಕರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯು ಪ್ರಾಧ್ಯಾಕರಿಗೆ ಶುಭಕೋರಿದೆ.