ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಜನಸಭಾ ಉಜಿರೆ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಅ 14 ರಿಂದ 16ರ ವರೆಗೆ ಯಕ್ಷೋತ್ಸವ – 3 ಪ್ರಯುಕ್ತ ಯಕ್ಷಗಾನ ತಾಳಮದ್ದಳೆ,ಪ್ರದರ್ಶನ ,ಸನ್ಮಾನ ಹಾಗು ಪ್ರಶಸ್ತಿ ಪ್ರದಾನ ನಡೆಯಲಿದೆ.
ಅ 14 ರಂದು ಸಂಜೆ 5 ಕ್ಕೆ ಯಕ್ಷೋತ್ಸವವನ್ನು ಉಜಿರೆ ಎಸ್ ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ!ಸತೀಶ್ಚಂದ್ರ ಎಸ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾ. ಪಂ.ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್, ಧರ್ಮಸ್ಥಳದ ಬಿ.ಭುಜಬಲಿ ,ತಾ!ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕೆ.ಪುರಂದರ ರಾವ್,ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ರಾಧಾಕೃಷ್ಣ ರಾವ್,ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್,ಶ್ರೀ ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆ ಅಧ್ಯಕ್ಷ ವಾಸುದೇವ ಸೋಮಯಾಜಿ, ಯಕ್ಷಗಾನ ಅರ್ಥಧಾರಿ ಶಂಭು ಶರ್ಮ ವಿಟ್ಲ ಭಾಗವಹಿಸಲಿದ್ದಾರೆ.
ನಂತರ ದಿನೇಶ್ ಅಮ್ಮಣ್ಣಾಯ ಹಾಡುಗಾರಿಕೆಯಲ್ಲಿ ಹಿರಿಯ ಅರ್ಥಧಾರಿಗಳಿಂದ “ಶ್ರೀ ರಾಮ ವನಗಮನ “ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅ 15 ರಂದು ಸಂಜೆ 5 ರಿಂದ ವಿ. ಪ. ಸದಸ್ಯ ಕೆ.ಹರೀಶ್ ಕುಮಾರ್ ದೀಪ ಪ್ರಜ್ವಲಿಸಲಿದ್ದು, ಉಜಿರೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟಿ ನೊಚ್ಚ, ಮೋಹನ ಶೆಟ್ಟಿಗಾರ್, ಸೀತಾರಾಮ ತೋಳ್ಪಡಿತ್ತಾಯ, ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಅನಂತ ಭಟ್ ಮಚ್ಚಿಮಲೆ, ರಘುರಾಮ ಶೆಟ್ಟಿ, ವಿನೋಬಾ ಕಾರಂತ್, ಕೃಷ್ಣ ಕುಮಾರ್, ಶ್ರೀಶ ಮುಚ್ಚಿನ್ನಾಯ, ದಯಾನಂದ ಎಳಚಿತ್ತಾಯ, ಮತ್ತು ಅನಂತರಾಮ ಮಯ್ಯ ಗೌರವ ಉಪಸ್ಥಿತರಿರುವರು.
ಬೆಳಾಲು ಲಕ್ಷ್ಮಣ ಗೌಡ ಅವರಿಗೆ ಕಲಾಗೌರವ ಸಲ್ಲಿಸಲಾಗುವುದು. ಸತ್ಯನಾರಾಯಣ ಪುಣಿಚಿತ್ತಾಯ ಹಾಡುಗಾರಿಕೆಯಲ್ಲಿ ಪ್ರಸಿದ್ಧಕಲಾವಿದರಿಂದ “ಚೂಡಾಮಣಿ ಪ್ರದಾನ”ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಅ 16 ರಂದು ಯಕ್ಷೋತ್ಸವ ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜಾ ದೀಪ ಪ್ರಜ್ವಲಿಸಲಿದ್ದು, ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿ,ಪ.ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಸಿದ್ಧ ಯಕ್ಷಗಾನ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್ ಅವರಿಗೆ ಯಕ್ಷಜನ ಸಭಾ ಪ್ರಶಸ್ತಿಪ್ರದಾನ ನಡೆಸಲಿದ್ದಾರೆ.
ಸಿರಿಬಾಗಿಲು ವೆಂಕ ಪ್ಪಯ್ಯ ಪ್ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರಿಗೆ ಕಲಾಗೌರವ ಸಮರ್ಪಿಸಲಿದ್ದು, ಯಕ್ಷಜನಸಭಾ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಅಧ್ಯಕ್ಷ ಡಾ! ಎಂ.ಎಂ.ದಯಾಕರ್, ದ .ಕ .ಕ.ಸಾ ಪ. ಅಧ್ಯಕ್ಷ ಡಾ|ಎಂ. ಪಿ .ಶ್ರೀನಾಥ್ ಗೌರವ ಉಪಸ್ಥಿತರಿರುವರು.
ಉಪನ್ಯಾಸಕ ಡಾ|ಶ್ರುತಕೀರ್ತಿರಾಜ್ ಅಭಿನಂದಿಸಲಿದ್ದಾರೆ. ಡಾ| ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಲಿದ್ದು ಬಳಿಕ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗು ವೆಂಕಟ್ರಮಣ ರಾವ್ ಬನ್ನೆಂಗಳ ಅವರ ಹಾಡುಗಾರಿಕೆಯಲ್ಲಿ, ಖ್ಯಾತ ಕಲಾವಿದರಿಂದ “ಕರ್ಣಾವಸಾನ “ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಡಿದೆ. ಯಕ್ಷಗಾನ ಕಲಾಭಿಮಾನಿಗಳು ಪ್ರೋತ್ಸಾಹಿಸುವಂತೆ ಯಕ್ಷಜನಸಭಾ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.