News Karnataka Kannada
Monday, April 29 2024
ಮಂಗಳೂರು

ಉಜಿರೆ: ಶ್ರದ್ಧೆ, ಛಲದಿಂದ ಯಶಸ್ಸು ಸಾಧ್ಯ- ಶೀಕೃಷ್ಣ ಕೆ

Ujire: Success is possible with diligence and perseverance: Sheekrishna K
Photo Credit : News Kannada

ಉಜಿರೆ: ಯಾವುದೇ ಕೆಲಸವನ್ನು ಪೂರ್ಣಗೊಳಿಸುವ ಮೊದಲು ಶ್ರದ್ಧೆಯಿರಬೇಕು. ಆ ಕೆಲಸ ಸಾಧ್ಯವಾಗುವುದಿಲ್ಲ ಎಂದು ಹಿಂದೆ ಸರಿಯಬಾರದು ಎಂದು ಶ್ರೀ.ಧ.ಮಂ ಕಾಲೇಜಿನ ಹಳೆಯ ವಿದ್ಯಾರ್ಥಿ, ಉಪ್ಪಿನಂಗಡಿಯ ಚಾರ್ಟೆಡ್‌ ಅಕೌಂಟೆಟ್  ಶೀಕೃಷ್ಣ ಕೆ ಹೇಳಿದರು.

ಶ್ರೀ.ಧ.ಮಂ ಕಾಲೇಜು ಉಜಿರೆಯ ಡಿ.ಎಡ್ ಸಭಾಂಗಣದಲ್ಲಿ ವಾಣಿಜ್ಯ ವಿಭಾಗವು ಆಯೋಜಿಸಿದ 5ನೇ ಎಸ್.ಡಿ.ಎಂ ನೆನಪಿನಂಗಳ ಹಿರಿಯ ವಿದ್ಯಾರ್ಥಿಯೊಂದಿಗಿನ ಸಂವಾದ ಕಾರ್ಯಕ್ರಮದ ಸರಣಿಯಲ್ಲಿ ಮಾತನಾಡಿದರು.

ಓದಿಗೆ ಹೆಚ್ಚಿನ ಗಮನವನ್ನು ಮೀಸಲಿಡಬೇಕು. ಕನ್ನಡ ಓದಿ ಚಾರ್ಟೆಡ್‌ ಅಕೌಂಟ್ ಮಾಡಿದವರು ಕೂಡಾ ಇದ್ದು, ಸದಾ ಅವರೇ ನಮಗೆ ಪ್ರೇರಣೆಯಾಗಿ ಹೊರ ಹೊಮ್ಮಿದ್ದಾರೆ. ವಿದ್ಯಾರ್ಥಿಗಳಿಗೆ ಬರವಣಿಗೆಯ ಜೊತೆ ಓದು ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿರಬೇಕು. ಭವಿಷ್ಯದಲ್ಲಿ ಏನಾಗಬೇಕು ಎಂಬುದರ ಬಗ್ಗೆ ಗುರಿ ಮತ್ತು ಅರಿವಿದ್ದಾಗ ಯಶಸ್ಸು ಸಾಧ್ಯ ಎಂದು ನುಡಿದರು.

ಉಜಿರೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ವಿದಾರ್ಥಿಗಳು ಇಂದು ವಿದೇಶದಲ್ಲಿಉನ್ನತ ಹುದ್ದೆಯಲ್ಲಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಔದ್ಯೋಗಿಕವಾಗಿ ಹೆಚ್ಚಿನ ಮಟ್ಟದಲ್ಲಿ ಬೆಳೆಯುವಂತಾಗಬೇಕು. ಆದರೆ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಬಂದ ಹಾದಿಯನ್ನು ಮರೆಯಬಾರದು. ಅನುಭವವು ಸವಿಯಲ್ಲ, ಅದರ ನೆನಪುಗಳು ಸವಿ ಎಂದು ಅಧ್ಯಕ್ಷ ಸ್ಥಾನ ವಹಿಸಿದ್ದ ಶ್ರೀ.ಧ.ಮಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ ಕುಮಾರ್ ಹೆಗ್ಡೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಎಸ್.ಡಿ.ಎಂ ನೆನಪಿನಂಗಳ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅಂತಿಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಿಶ್ಚಿತಾ ಎ.ಪಿ ಅವರಿಗೆ ಎಸ್.ಡಿ.ಎಂ ನೆನಪಿನಂಗಳದ ಸಂಪನ್ಮೂಲ ವ್ಯಕ್ತಿ ಶೀಕೃಷ್ಣ ಕೆ 5000 ರೂಪಾಯಿಗಳ ಸಹಾಯಧನ ನೀಡಿದರು.

ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ. ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರು ಶ್ರೇಯಸ್‌ ಜೈನ್, ಸುಮನ್‌ ಜೈನ್ ಮತ್ತು ಅಂತಿಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಶ್ರೀನಾಥ್ ಎಂ.ಪಿ. ಸ್ವಾಗತಿಸಿದರು. ಅಂತಿಮ ವಿಭಾಗದ ವಿದ್ಯಾರ್ಥಿನಿ ಶ್ರಾವ್ಯ ನಿರೂಪಿಸಿ, ವಂದಿಸಿದರು.

ವರದಿ: ಹೇಮಾವತಿ, ಚೆಲುವಮ್ಮ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು