ಮಂಗಳೂರು: ಅಲೋಶಿಯಸ್ ಸಮೂಹ ಸಂಸ್ಥೆಗಳ ಪೋಷಕ ಸಂತರಾದ ಅಲೋಶಿಯಸ್ ಗೊನ್ಝಾಗ ಅವರ ಹಬ್ಬವನ್ನು 21 ಜೂನ್ 2023 ರಂದು ಲೊಯೊಲಾ ಸಭಾಂಗಣದಲ್ಲಿ ‘ಉತ್ತಮ ಭವಿಷ್ಯವನ್ನು ರೂಪಿಸಲು ಯುವಜನಾಂಗವನ್ನು ಜಾಗೃತಗೊಳಿಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ. ಲಾರೆನ್ಸ್ ಮಾಕ್ಸಿಮ್ ನೊರೋನ್ಹಾ ಅವರು ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅಲೋಶಿಯಸ್ ಸಮೂಹ ಸಂಸ್ಥೆಗಳ ವರಿಷ್ಠರಾದ ವಂ| ಗು| ಮೆಲ್ವಿನ್ ಪಿಂಟೊ ಎಸ್ ಜೆ, ಕಾಲೇಜಿನ ಪ್ರಾಚಾರ್ಯರಾದ ವಂ| ಗು| ಕ್ಲಿಫರ್ಡ್ ಸಿಕ್ವೇರಾ ಎಸ್ ಜೆ, ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ವಂ| ಗು| ಮೆಲ್ವಿನ್ ಲೋಬೊ ಎಸ್ ಜೆ, ಹಾಗೂ ಸಂತ ಅಲೋಶಿಯಸ್ ಐಟಿಐ ನಿರ್ದೇಶಕರಾದ ವಂ| ಗು| ಜಾನ್ ಡಿಸೋಜ ಉಪಸ್ಥಿತರಿದ್ದರು. ಕಾಲೇಜಿನ ಸುಮಾರು 1200 ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಹಾಗೂ ಕಾಲೇಜಿನ ಹಿತಚಿಂತಕರು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದರು.
ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಂ| ಗು| ಕ್ಲಿಫರ್ಡ್ ಸಿಕ್ವೇರಾ ಎಸ್ ಜೆ ಇವರು ವಂದನಾರ್ಪಣೆಗೈದರು. ಸಂತ ಅಲೋಶಿಯಸ್ ಗೊನ್ಝಾಗ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.