ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ರವರ ಜಂಟಿ ಆಶ್ರಯದಲ್ಲಿ ಅಕಾಡೆಮಿಯ ಸಿರಿಚಾವಡಿಯಲ್ಲಿ ಜು.16 ರಿಂದ ಜು.22ವರೆಗೆ “ತುಳು ನಾಟಕ ಪರ್ಬ 2022” ಆಯೋಜಿಸಲಾಗಿದೆ.
ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದೇ ಈ ನಾಟಕ ಪರ್ಬದ ಉದ್ದೇಶವಾಗಿರುತ್ತದೆ. ಜು.16 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ ಸಾರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್ ರವರ ಘನ ಉಪಸ್ಥಿತಿಯಲ್ಲಿ ಮನಪಾ ಸದಸ್ಯರು, ಆಯುಕ್ತರು, ರಂಗಭೂಮಿ ಹಿರಿಯ ಕಲಾವಿದರು, ತುಳು ಸಿನೆಮಾ ನಟ, ನಿರ್ದೇಶಕರು, ಅಕಾಡೆಮಿ ಸದಸ್ಯರು ಭಾಗವಹಿಸಲಿರುವರು.
ಜು.16 ರಿಂದ ಜು.22ವರೆಗೆ 7 ದಿನಗಳಲ್ಲಿ ಒಟ್ಟು 9 ತುಳು ನಾಟಕ ಪ್ರದರ್ಶನ ನಡೆಯಲಿರುವುದು. ನವರಸ ಕಲಾವಿದೆರ್, ಓಂಶಕ್ತಿ ಗೆಳೆಯರ ಬಳಗ ಲಾಯಿಲ ಬೆಳ್ತಂಗಡಿ ಯವರಿಂದ “ತುಂಗಭದ್ರ”, ಶ್ರೀ ವಿಷ್ಣು ಕಲಾ ತಂಡ, ತುಳುವಪ್ಪೆ ಕಲಾವಿದೆರ್ ಪೆರ್ನೆ ಯವರಿಂದ “ಕುಡ ಒಂಜಾಕ”, ಅಭಿನಯ ಕಲಾವಿದೆರ್ ಮಂಕುಡೆ ಕುಡ್ತಮುಗೇರು ಯವರಿಂದ “ಈ ತೆರಿನಗ”, ಕಲಾಮೃತ ಕಲಾವಿದೆರ್ (ರಿ) ವಾಮಂಜೂರ್ ರವರಿಂದ “ಕಥೆ ಏರ್ ಬರೆಪೆರ್?”, ಸಿಂಗಾರ ಕಲಾವಿದೆರ್ ಬಜಗೋಳಿ ಯವರಿಂದ “ನಂಬುಗೆದ ಬೊಲ್ಪು”, ವಿಷ್ಣು ಕಲಾವಿದೆರ್ ಮದ್ದಡ್ಕ ದವರಿಂದ “ಆ..ದೇವೆರ್ ತೂವಡ್”, ಸೃಷ್ಟಿ ಕಲಾವಿದೆರ್ ನೆಲ್ಲಿಗುಡ್ಡೆ, ಬಜಗೋಳಿ ಯವರಿಂದ “ಕಾಲ ತತ್ತ್ಂಡ ಏರೆನ್ಲಾ ಬುಡಯೆ”, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ರವರಿಂದ “ಅಮ್ಮಾ ಎನ್ನಮ್ಮಾ” ಮತ್ತು ಮಂಜುಶ್ರೀ ಕಲಾವಿದೆರ್ ಮಂಗಳೂರು ರವರಿಂದ”ದಿಸೆ ತಿರ್ಗ್ನಗ” ತುಳು ನಾಟಕ ಪ್ರದರ್ಶನಗಳು ನಡೆಯಲಿವೆ.
ಜು. 22ರಂದು ಮದ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ ಸಾರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮನಪಾ ಸದಸ್ಯರು, ಆಯುಕ್ತರು, ರಂಗಭೂಮಿ ಹಿರಿಯ ಕಲಾವಿದರು, ತುಳು ಸಿನೆಮಾ ನಟ, ನಿರ್ದೇಶಕರು, ಅಕಾಡೆಮಿ ಸದಸ್ಯರು ಭಾಗವಹಿಸಲಿರುವರು.
ಈ ಕಾರ್ಯಕ್ರಮವು ನಮ್ಮ ಟಿವಿ ಚಾನೆಲ್ ನಲ್ಲಿ ನೇರ ಪ್ರಸಾರವಿದ್ದು, ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ನಾಟಕ ವೀಕ್ಷಿಸಲು ಮುಕ್ತ ಅವಕಾಶ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ದಯಾನಂದ ಜಿ. ಕತ್ತಲ್ಸಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.