ಬೆಳ್ತಂಗಡಿ: ನಿರಂತರ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ತೇಲಿ ಬಂದ ಜಾನುವಾರಿನ ಮೃತದೇಹವೊಂದು ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಲಾಗಿರುವ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದೆ.
ಶುಕ್ರವಾರ ಬೆಳಗಿನ ಜಾವ ಸ್ಥಳೀಯರಿಗೆ ಈ ದೃಶ್ಯ ಕಂಡು ಬಂದಿದೆ. ಆದರೆ ಇದರ ವಾರಸುದಾರರು ಯಾರೆಂದು ತಿಳಿದು ಬಂದಿಲ್ಲ.
ಇದೇ ಕೊಪ್ಪದಗಂಡಿ ಪ್ರದೇಶದಲ್ಲಿ ಅಂದು ನೆರೆಬಂದು ಕಿಂಡಿ ಅಣೆಕಟ್ಟಿನ ದ್ವಾರಗಳು ಮರಮಟ್ಟುಗಳಿಂದ ಮುಚ್ಚಲ್ಪಟ್ಟ ನೆರೆ ನೀರು ಅಕ್ಕಪಕ್ಕದ ಕೃಷಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೆ ಕಾರಣವಾಗಿತ್ತು.
ಈ ಬಾರಿಯೂ ವಾರದಿಂದ ವರುಣನ ಅರ್ಭಟ ಜೋರಾಗಿದ್ದು ಜನ ಸಾಮಾನ್ಯರು ಕಂಗಲಾಗಿರುವುದಂತು ಸತ್ಯ.