ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ದರ ಎಪ್ರಿಲ್ 1ರಿಂದ ಮತ್ತೆ ಹೆಚ್ಚಳವಾಗಲಿದೆ. ಕರಾವಳಿಯಲ್ಲಿನ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು, ಕೇರಳ-ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್ಗೇಟ್ಗಳಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.
ಏಕಮುಖ ಸಂಚಾರದ ಶುಲ್ಕದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ, ದ್ವಿಮುಖ ಸಂಚಾರ ಮತ್ತು ಮಾಸಿಕ ಪಾಸ್ನ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ.
ಪ್ರತೀ ವರ್ಷ ಎಪ್ರಿಲ್ 1ರಿಂದ ದೇಶಾದ್ಯಂತ ಟೋಲ್ ಶುಲ್ಕ ಪರಿಷ್ಕರಣೆಯಾಗುತ್ತದೆ. ಬ್ರಹ್ಮರಕೂಟ್ಲು ಟೋಲ್ನಲ್ಲಿ ಕಾರು, ಜೀಪ್, ವ್ಯಾನ್ ದ್ವಿಮುಖ ಸಂಚಾರ ಹಿಂದೆ ರೂ.45 ಇತ್ತು ಈಗ ಹೊಸ ಶುಲ್ಕ ರೂ.50 ಆಗಿದೆ. ತಲಪಾಡಿ ಟೋಲ್ನಲ್ಲಿ ಕಾರು, ಜೀಪ್, ವ್ಯಾನ್ ಏಕಮುಖ ಸಂಚಾರದ ಹಳೆ ಶುಲ್ಕ ರೂ.50 ಹೊಸ ಶುಲ್ಕ ರೂ.55 ಆಗಿದ್ದು, ಈ ರೀತಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ದರದಲ್ಲಿ ಹೆಚ್ಚಳವಾಗಿದೆ.