News Karnataka Kannada
Saturday, April 27 2024
ಮಂಗಳೂರು

ಎಪ್ರಿಲ್‌ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ದರ ಹೆಚ್ಚಳ

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ದರ ಎಪ್ರಿಲ್‌ 1ರಿಂದ ಮತ್ತೆ ಹೆಚ್ಚಳವಾಗಲಿದೆ. ಕರಾವಳಿಯಲ್ಲಿನ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು, ಕೇರಳ-ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್‌ಗೇಟ್‌ಗಳಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.
Photo Credit : NewsKarnataka

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ದರ ಎಪ್ರಿಲ್‌ 1ರಿಂದ ಮತ್ತೆ ಹೆಚ್ಚಳವಾಗಲಿದೆ. ಕರಾವಳಿಯಲ್ಲಿನ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು, ಕೇರಳ-ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್‌ಗೇಟ್‌ಗಳಲ್ಲಿ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.

ಏಕಮುಖ ಸಂಚಾರದ ಶುಲ್ಕದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ, ದ್ವಿಮುಖ ಸಂಚಾರ ಮತ್ತು ಮಾಸಿಕ ಪಾಸ್‌ನ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ.

ಪ್ರತೀ ವರ್ಷ ಎಪ್ರಿಲ್‌ 1ರಿಂದ ದೇಶಾದ್ಯಂತ ಟೋಲ್‌ ಶುಲ್ಕ ಪರಿಷ್ಕರಣೆಯಾಗುತ್ತದೆ. ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಕಾರು, ಜೀಪ್‌, ವ್ಯಾನ್‌ ದ್ವಿಮುಖ ಸಂಚಾರ ಹಿಂದೆ ರೂ.45 ಇತ್ತು ಈಗ ಹೊಸ ಶುಲ್ಕ ರೂ.50 ಆಗಿದೆ. ತಲಪಾಡಿ ಟೋಲ್‌ನಲ್ಲಿ ಕಾರು, ಜೀಪ್‌, ವ್ಯಾನ್‌ ಏಕಮುಖ ಸಂಚಾರದ ಹಳೆ ಶುಲ್ಕ ರೂ.50 ಹೊಸ ಶುಲ್ಕ ರೂ.55 ಆಗಿದ್ದು, ಈ ರೀತಿ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ದರದಲ್ಲಿ ಹೆಚ್ಚಳವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು