ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ಕೈಕಾಲು, ತಟ್ಟೆ ತೊಳೆಯಲೂ ನೀರಿಲ್ಲ ಎನ್ನಲಾಗಿದೆ.
ನೀರಿನ ಸಮಸ್ಯೆಯಿಂದಾಗಿ ಕಟೀಲು ದೇಗುಲದ ಅನ್ನ ಪ್ರಸಾದಕ್ಕಾಗಿ ಕೊಡುವ ತಟ್ಟೆಯ ಬದಲು ಬಳಸಿ ಎಸೆಯುವ ಬಾಳೆ ಎಲೆಯನ್ನು ಬಳಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಭಕ್ತರು ಕೈಕಾಲು ತೊಳೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ದೇಗುಲಕ್ಕೆ ದಿನವೊಂದಕ್ಕೆ ಸುಮಾರು 7 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ಅಲ್ಲಿಗೆ ನೀರು ಪೂರೈಸುತ್ತಿದ್ದ ಬೋರ್ ವೆಲ್ ಗಳು ಕೂಡ ಬತ್ತಿದೆ. ಈಗ ಖಾಸಗಿ ಟ್ಯಾಂಕರ್ ಗಳ ಮೂಲಕ ದೇಗುಲಕ್ಕೆ ನೀರು ಪೂರೈಕೆಯಾಗುತ್ತಿದೆ.