ಮಂಗಳೂರು: ಈಗಾಗಲೇ ಎಡಿಜಿಪಿ ಆಲೋಕ್ ಕುಮಾರ್ ದಕ್ಷಿಣ ಜಿಲ್ಲೆಗೆ ಅನ್ವಯವಾಗುವಂತೆ ಸೂಚಿಸಿದ್ದ ದ್ವಿಚಕ್ರವಾಹನದ ಹೊಸ ನಿಯಮವನ್ನು ತಿದ್ದುಪಡಿಗೊಳಿಸಿ ಮಂಗಳೂರು ಮಹಾನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತೊಮ್ಮೆ ಹೊಸ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಅಸಮಾಧಾನಕ್ಕೆ ಮಣಿದ ಜಿಲ್ಲಾಡಳಿತ ಬೈಕ್ ಹಿಂಬದಿ ಸವಾರನ ನಿರ್ಬಂಧ ನಿಯಮವನ್ನು ಹಿಂತೆಗೆದುಕೊಳ್ಳಲಾಗಿದೆ ಎನ್ನುವ ಅಧಿಕೃತ ಮಾಹಿತಿಯನ್ನು ಈಗಾಗಲೇ ನೀಡಿದ್ದಾರೆ.