ಸುರತ್ಕಲ್: ಇಲ್ಲಿನ ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದ್ದು ಅದರ ಪೂರ್ವಭಾವಿಯಾಗಿ ಇಂದು ಬೆಳಗ್ಗೆ ಕ್ಷೇತ್ರದ ನೂತನ ದ್ವಾರ ಹಾಗೂ ಕಾಂಕ್ರೀಟ್ ರಸ್ತೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಲೋಕಾರ್ಪಣೆಗೊಳಿಸಿದರು.
ನಾಲ್ಕು ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣಗೊಂಡಿದ್ದು, ದ್ವಾರವನ್ನು “ಶ್ರೀ ದ್ವಾರ” ಹೋಟೆಲ್ ನ ಕೃಷ್ಣ ಶೆಟ್ಟಿ ಅವರು ಕೊಡುಗೆ ನೀಡಿದ್ದಾರೆ.
ಕಾರ್ಪೋರೇಟರ್ ಸುಮಿತ್ರಾ ಕರಿಯ, ವೇದಾವತಿ, ಕೃಷ್ಣ ಶೆಟ್ಟಿ, ಉಮೇಶ್ ಕರ್ಕೇರ, ಕೇಶವ ಸಾಲಿಯಾನ್, ಗಣೇಶ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.