News Karnataka Kannada
Thursday, May 02 2024
ಮಂಗಳೂರು

ಸುರತ್ಕಲ್: ನಾಯರ್ ಕುದ್ರು ಸೇತುವೆಗೆ ಶಾಸಕ ಭರತ್ ಶೆಟ್ಟಿ ಅವರಿಂದ ಭೂಮಿಪೂಜೆ

Rs 2,250 crore Development work at a cost, says MLA Bharath Shetty
Photo Credit : News Kannada

ಸುರತ್ಕಲ್: ಹೆಸರಾಂತ ವಿಹಾರ ತಾಣ ತಣ್ಣೀರುಬಾವಿ ಬೀಚ್ ನಿಂದ ಅನತಿ ದೂರದಲ್ಲಿರುವ  ನಾಯರ್ ಕುದ್ರು ಮೂಲ ಸೌಕರ್ಯವಿಲ್ಲದೆ ಕಳೆದ 3 ದಶಕಗಳಿಂದ ಕುಗ್ರಾಮದಂತಿತ್ತು. ಮೀನುಗಾರಿಕೆಯನ್ನೇ ಅವಲಂಬಿಸಿರುವ ಗ್ರಾಮಸ್ಥರು ದ್ವೀಪದಂತಿದ್ದ ನಾಯರ್ ಕುದ್ರು ಅಭಿವೃದ್ಧಿಗಾಗಿ ಕಳೆದ 30 ವರ್ಷಗಳಿಂದ ಪಟ್ಟ ಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಿದೆ. ಸೇತುವೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ 3.5 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲು ಶುಕ್ರವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಭೂಮಿಪೂಜೆ ನೆರವೇರಿಸಿದ್ದು ಈ ವೇಳೆ ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿದರು.

ಬೂತ್ ಅಧ್ಯಕ್ಷ ಸುಜಿತ್, ಸ್ಥಳೀಯ ಕಾರ್ಪೋರೇಟರ್ ಗಳಾದ ಸುನೀತಾ, ನಾಗರಾಜ್, ಉಷಾ, ನಾಗವೇಣಿ, ರೇವತಿ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.

ಸೇತುವೆ ನಿರ್ಮಾಣವಾಗದೆ ಸಮಸ್ಯೆಯಾಗಿತ್ತು

ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಸ್ಥಳೀಯರಾದ ನಾಗರಾಜ್, ಭಾರತಿ ಸುವರ್ಣ ಅವರು, “ನಾಯರ್ ಕುದ್ರು ಮಂಗಳೂರು ಪಟ್ಟಣಕ್ಕೆ ಸಮೀಪದಲ್ಲಿದ್ದರೂ ಇಲ್ಲಿ ಸೇತುವೆಯಿಲ್ಲದೆ ನಾವೆಲ್ಲರೂ ದ್ವೀಪದ ನಿವಾಸಿಗಳಂತೆ ಜೀವನ ಸಾಗಿಸುತ್ತಿದ್ದೆವು. ಕಳೆದ 30 ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದು ಇಲ್ಲಿಯವರೆಗೆ ನ್ಯಾಯ ಸಿಕ್ಕಿರಲಿಲ್ಲ. ಈ ಬಾರಿ ಶಾಸಕ ಭರತ್ ಶೆಟ್ಟಿ ಅವರು ಮುತುವರ್ಜಿ ವಹಿಸಿ ನಮ್ಮ ಬಹುಕಾಲದ ಬೇಡಿಕೆಗೆ ಮನ್ನಣೆ ನೀಡಿದ್ದಾರೆ. ಅವರಿಗೆ ದೇವರ ಆಶೀರ್ವಾದ ಸದಾ ಇರಲಿ” ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು