ಕಾಸರಗೋಡು: ಗಲ್ಫ್ ಉದ್ಯೋಗಿಯಾಗಿದ್ದ ಪುತ್ತಿಗೆ ಮುಗುವಿನ ಅಬೂಬಕ್ಕರ್ ಸಿದ್ದಿಕ್ ( ೩೨) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯೋರ್ವನನ್ನು ಕೋಜಿಕ್ಕೋಡ್ ವಿಮಾನ ನಿಲ್ದಾಣದಿಂದ ತನಿಖಾ ತಂಡ ಬಂಧಿಸಿದೆ.
ಪೈವಳಿಕೆ ಬಾಯಾರಿನ ಅಸ್ಫಾನ್ ( ೨೬) ಬಂಧಿತ ಆರೋಪಿ. ಕೃತ್ಯದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಈತ ಊರಿಗೆ ಮರಳುತ್ತಿದ್ದಾಗ ಕೋಜಿಕ್ಕೋಡ್ ವಿಮಾನ ನಿಲ್ದಾಣದಿಂದ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ತನಿಖಾ ತಂಡಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಈತನನ್ನು ಬಂಧಿಸಲಾಗಿದೆ.
ಜೂನ್ ೨೬ ರಂದು ಅಬೂಬಕ್ಕರ್ ಸಿದ್ದಿಕ್ ನನ್ನು ಅಪಹರಿಸಿದ್ದ ತಂಡವು ಥಳಿಸಿ ಕೊಲೆ ಮಾಡಿತ್ತು. ಪೈವಳಿಕೆ ಸಮೀಪ ಈ ಕೃತ್ಯ ನಡೆದಿತ್ತು. ಬಳಿಕ ಮೃತದೇಹವನ್ನು ಬಂದ್ಯೋಡು ಸಮೀಪದ ಆಸ್ಪತ್ರೆ ಬಳಿ ತೊರೆದು ತಂಡವು ಪರಾರಿಯಾಗಿತ್ತು.
ಕೃತ್ಯಕ್ಕೆ ಸಂಬಂಧಪಟ್ಟನಂತೆ ಆರು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಕೃತ್ಯದಲ್ಲಿ ೧೫ ಕ್ಕೂ ಅಧಿಕ ಮಂದಿ ಶಾಮೀಲಾಗಿದ್ದು, ವಿದೇಶಕ್ಕೆ ಪರಾರಿಯಾದ ಉಳಿದವರಿಗಾಗಿ ತನಿಖಾ ತಂಡ ಮುಂದಿನ ಕ್ರಮ ತೆಗೆದು ಕ್ರಮ ತೆಗೆದುಕೊಂಡಿದ್ದಾರೆ.