ಮಂಗಳೂರು: ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ಸಮಾರಂಭವು ಮಾ.14ರಂದು ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಎಸ್ಪಿಎ ಮೈಸೂರಿನಲ್ಲಿ ನಡೆಯಿತು.
ಆ ಪ್ರಯುಕ್ತ ವರ್ಷದ 2023ನೇ ವರ್ಷದ ಉದಯೋನ್ಮುಖ ಯೋಜನೆ ಪ್ರಶಸ್ತಿಯನ್ನು ಮಂಗಳೂರಿನ ರೋಹನ್ ಸಿಟಿ ಯೋಜನೆಯ ನಿರ್ಮಾಪಕರಾದ ರೋಹನ್ ಕಾರ್ಪೋರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ರೋಹನ್ ಮೋಂತೆರೋ ಅವರಿಗೆ ನೀಡಲಾಯಿತು. ಅವರ ಪರವಾಗಿ ಧೀಮಂತ್ ಸುವರ್ಣ (ಜನರಲ್ ಮ್ಯಾನೇಜರ್, ಸೇಲ್ಸ್ ಮಾರ್ಕೆಟಿಂಗ್) ಮತ್ತು ಆಲ್ಫೋನ್ಸ್ ಫೆರ್ನಾಂಡಿಸ್ (ಸೇಲ್ಸ್ ಅಸೋಸಿಯೇಟ್) ಪ್ರಶಸ್ತಿ ಸ್ವೀಕರಿಸಿದರು. ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್ ಮೈಸೂರು-2023 ಪ್ರಶಸ್ತಿ ನೀಡಲ್ಪಟ್ಟ 37 ಸಂಸ್ಥೆಗಳಲ್ಲಿ ವಿದ್ಯಾವರ್ಧಕ ಶಿಕ್ಷಣ ಟ್ರಸ್ಟ್, ಲಲಿತಾ ಜ್ಯುವೆಲ್ಲರಿ, ಎಸ್ಸಿಡಿಸಿಸಿ ಬ್ಯಾಂಕ್, ರೋಹನ್ ಕಾರ್ಪೋರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿವೆ.
ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಸ್ಪಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಾಶಿ ಖನ್ನಾ ಅವರು ಬಿಸಿನೆಸ್ ಐಕಾನ್ಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಮೈಸೂರು ವಿವಿ ಮಾಜಿ ಉಪಕುಲಪತಿ ಕೆ.ಎಸ್. ರಂಗಪ್ಪ ಉಪಸ್ಥಿತರಿದ್ದರು. ಸಮಾರಂಭದ ನಂತರ ತ್ರಿಶೂಲಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೈಸೂರು ಮತ್ತು ಸಮೀರ್ ರಾವ್ ಮತ್ತು ಆದರ್ಶ ಶೆಣೈ ಅವರಿಂದ ಬಾನ್ಸುರಿ – ತಬಲಾ ಕಾರ್ಯಕ್ರಮ ನಡೆಯಿತು.