ಮಂಗಳೂರು: ಕರಾವಳಿ ಕೆನೈನ್ ಕ್ಲಬ್ ಇವರ ಆಶ್ರಯದಲ್ಲಿ ಮಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನಡೆಸಲ್ಪಡುವ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನವನ್ನು ಇದೇ ಬರುವ ತಾ. 11-12-2022ನೇ ರವಿವಾರದಂದು ಬೆಳಿಗ್ಗೆ ಗಂಟೆ 9.00ಕ್ಕೆ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್ ಇವರು ಉದ್ಘಾಟನೆ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಜಯಾನಂದ ಅಂಚನ್ ಮತ್ತು ಶ್ರೀಮತಿ ಶ್ವೇತಾ ಪರೇಕ್ ಇವರು ಭಾಗವಹಿಸಲಿರುವರು.
ಈ ಶ್ವಾನ ಪ್ರದರ್ಶನಕ್ಕೆ ಮುಖ್ಯ ತೀರ್ಪುಗಾರರಾಗಿ ಕೊರಿಯ ದೇಶದಿಂದ ಶ್ರೀ ಚೂಂಗ್-ಗೀ ಎಎಚ್ಎನ್ ಮತ್ತು ಶ್ರೀ ವೊಂಗ್ ಜಾಂಗ್ ಲೀ ಇವರು ಆಗಮಿಸಲಿರುವರು.
ಎಲ್ಲಾ ತಳಿಗಳ ಶ್ವಾನ ಪ್ರದರ್ಶನವು ಲಾಲ್ ಭಾಗ್ನ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಪ್ರದರ್ಶನವು ಕರಾವಳಿ ಕೆನೈನ್ ಕ್ಲಬ್ ಇವರ ಎಲ್ಲಾ ತಳಿಗಳ 15ನೇ ಮತ್ತು 16ನೇ ಚಾಪಿಯನ್ಶಿಫ್ ಶೋ ಆಗಿರುತ್ತದೆ. ಈ ಪ್ರದರ್ಶನವು ನೋಡುಗರ ಕಣ್ಣಿಗೆ ಹಬ್ಬವಾಗಿರುತ್ತದೆ.