News Karnataka Kannada
Tuesday, May 14 2024
ಮಂಗಳೂರು

ಮಂಗಳೂರು ಫಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್ ಕಾಲೇಜಿನಲ್ಲಿ ಟೇಬಲ್ ಟೆನಿಸ್ ಪಂದ್ಯಾವಳಿ

RGUSC Mysore Zonal Table Tennis Men's and Women's Tournament
Photo Credit : News Kannada

ಮಂಗಳೂರು: ಬೆಂಗಳೂರಿನ ರಾಜೀವ್ ಯುನಿರ್ವಸಿಟಿ ಆಫ್ ಹೆಲ್ತ್ ಸೈನ್ಸಸ್ ಮತ್ತು ಫಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್ ವತಿಯಿಂದ ಆರ್‌ಜಿಯುಎಸ್‌ಸಿ ಮೈಸೂರು ಝೋನಲ್ ಟೇಬಲ್ ಟೆನಿಸ್ ಪುರುಷ ಹಾಗೂ ಮಹಿಳೆಯರ ಪಂದ್ಯಾವಳಿ ನಡೆಯಿತು.

ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆರ್‌ಜಿಯುಎಸ್‌ಸಿ ಮೈಸೂರು ಝೋನಲ್ ಟೇಬಲ್ ಟೆನಿಸ್ ಪುರುಷ ಹಾಗೂ ಮಹಿಳೆಯರ ಪಂದ್ಯಾವಳಿಗೆ ಚಾಲನೆ ಸಿಕ್ಕಿತ್ತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೇ.ಫಾದರ್ ರಿಚರ್ಡ್ ಅಲೋಶಿಯಸ್ ಅವರು ದೀಪ ಬೆಳಗಿಸಿ, ಉದ್ಘಾಟಿಸಿ, ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಜೊತೆಯಲ್ಲಿ ಕ್ರೀಡೆಯು ಅತೀ ಮುಖ್ಯವಾಗಿದೆ. ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಕೆಲಸ ಮಾಡಬೇಕೆಂದರು. ಇನ್ನು ಇತ್ತೀಚಿನ ದಿನಗಳಲ್ಲಿ ಯುವಕರು ಅಘಾತದಲ್ಲಿ ಮೃತಪಟ್ಟಿರುವ ವರದಿಯಾಗುತ್ತಿದೆ. ಯುವಕರು ಅತೀ ವೇಗ ಚಲಾವಣೆಯಲ್ಲಿ ಇರದೇ ಜಾಗೃತೆ ವಹಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ತದ ಬಳಿಕ ಮಾತನಾಡಿದ ಟೇಬಲ್ ಟೆನಿಸ್ ಸೆಂಟರ್ ಫಾರ್ ಎಕ್ಸಲೈನ್ಸ್ ಸ್ಥಾಪಕ ಮತ್ತು ಮುಖ್ಯ ಕೋಚ್ ಆಗಿರುವ ಎಂ.ಆರ್ ಅಶ್ವಿನ್‌ಕುಮಾರ್, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು. ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡು, ಮಹತ್ತರ ಸಾಧನೆ ಮಾಡಬೇಕೆಂದರು.

ಈ ವೇಳೆಯಲ್ಲಿ ಫಾದರ್ ಮುಲ್ಲರ್‍ಸ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಜಿತ್ ಮೆನೇಜಸ್, ಸಹಾಯಕ ಆಡಳಿತ ಅಧಿಕಾರಿಗಳಾದ ರೆವರೆಂಡ್ ಫಾದರ್ ನೆಲ್ಸನ್ ಧೀರಜ್ ಪಾಯಸ್, ಕ್ರೀಡಾ ಸಂಯೋಜಕಿ ರಮ್ಯಾಶ್ರೀ ಎಸ್, ದೈಹಿಕ ಶಿಕ್ಷಕಿ ಸುಷ್ಮಾ ಕೆ.ಆರ್, ಮೈಸೂರು ಝೋನಲ್ ಕ್ವಾಂಡಿನೇಟರ್ ಡಾ| ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು