ಮಂಗಳೂರು: ಬೆಂಗಳೂರಿನ ರಾಜೀವ್ ಯುನಿರ್ವಸಿಟಿ ಆಫ್ ಹೆಲ್ತ್ ಸೈನ್ಸಸ್ ಮತ್ತು ಫಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್ ವತಿಯಿಂದ ಆರ್ಜಿಯುಎಸ್ಸಿ ಮೈಸೂರು ಝೋನಲ್ ಟೇಬಲ್ ಟೆನಿಸ್ ಪುರುಷ ಹಾಗೂ ಮಹಿಳೆಯರ ಪಂದ್ಯಾವಳಿ ನಡೆಯಿತು.
ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆರ್ಜಿಯುಎಸ್ಸಿ ಮೈಸೂರು ಝೋನಲ್ ಟೇಬಲ್ ಟೆನಿಸ್ ಪುರುಷ ಹಾಗೂ ಮಹಿಳೆಯರ ಪಂದ್ಯಾವಳಿಗೆ ಚಾಲನೆ ಸಿಕ್ಕಿತ್ತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೇ.ಫಾದರ್ ರಿಚರ್ಡ್ ಅಲೋಶಿಯಸ್ ಅವರು ದೀಪ ಬೆಳಗಿಸಿ, ಉದ್ಘಾಟಿಸಿ, ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಜೊತೆಯಲ್ಲಿ ಕ್ರೀಡೆಯು ಅತೀ ಮುಖ್ಯವಾಗಿದೆ. ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಕೆಲಸ ಮಾಡಬೇಕೆಂದರು. ಇನ್ನು ಇತ್ತೀಚಿನ ದಿನಗಳಲ್ಲಿ ಯುವಕರು ಅಘಾತದಲ್ಲಿ ಮೃತಪಟ್ಟಿರುವ ವರದಿಯಾಗುತ್ತಿದೆ. ಯುವಕರು ಅತೀ ವೇಗ ಚಲಾವಣೆಯಲ್ಲಿ ಇರದೇ ಜಾಗೃತೆ ವಹಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತದ ಬಳಿಕ ಮಾತನಾಡಿದ ಟೇಬಲ್ ಟೆನಿಸ್ ಸೆಂಟರ್ ಫಾರ್ ಎಕ್ಸಲೈನ್ಸ್ ಸ್ಥಾಪಕ ಮತ್ತು ಮುಖ್ಯ ಕೋಚ್ ಆಗಿರುವ ಎಂ.ಆರ್ ಅಶ್ವಿನ್ಕುಮಾರ್, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು. ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡು, ಮಹತ್ತರ ಸಾಧನೆ ಮಾಡಬೇಕೆಂದರು.
ಈ ವೇಳೆಯಲ್ಲಿ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಜಿತ್ ಮೆನೇಜಸ್, ಸಹಾಯಕ ಆಡಳಿತ ಅಧಿಕಾರಿಗಳಾದ ರೆವರೆಂಡ್ ಫಾದರ್ ನೆಲ್ಸನ್ ಧೀರಜ್ ಪಾಯಸ್, ಕ್ರೀಡಾ ಸಂಯೋಜಕಿ ರಮ್ಯಾಶ್ರೀ ಎಸ್, ದೈಹಿಕ ಶಿಕ್ಷಕಿ ಸುಷ್ಮಾ ಕೆ.ಆರ್, ಮೈಸೂರು ಝೋನಲ್ ಕ್ವಾಂಡಿನೇಟರ್ ಡಾ| ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.