News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ನಾರಾಯಣಗುರು ಜಯಂತಿಗೆ ಸರಕಾರ ಸರಣಿ ಅಪಮಾನ ಮಾಡುತ್ತಿದೆ ರಮಾನಾಥ್ ರೈ

Ramanath Rai is doing a series of insults to Narayana Guru Jayanti.
Photo Credit : News Kannada

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಸಂದರ್ಭದಲ್ಲಿ ರಾಜ್ಯ ಸರಕಾರ ಸರಣಿ ಅಪಮಾನ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ದೂರಿದ್ದಾರೆ.

ನಾರಾಯಣಗುರು ಜನ್ಮ ದಿನೋತ್ಸವದ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು ನಾನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು ಸರಕಾರಿ ಕಾರ್ಯಕ್ರಮ ಮಾಡಬೇಕೆಂದು ಆಹ್ವಾನಿಸಿ ಅವರು ಬಂಟ್ವಾಳಕ್ಕೆ ಬಂದು ಭರವಸೆ ಕೊಟ್ಟು ಜನ್ಮ ದಿನವನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಮಾಡಲು ಆದೇಶ ನೀಡಿದರು.

ಆದರೆ ಈ ಬಾರಿ ಸರಕಾರ ಅದನ್ನು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ನಲ್ಲಿ ಮಾಡಬೇಕಾಗಿತ್ತು ಬ್ರಹ್ಮ ಶ್ರೀಗಳು ಇಡೀ ಸಮಾಜಕ್ಕೆ ಸೇರಿದವರು. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಬ್ರಹ್ಮ ಶ್ರೀಗಳಿಗೆ ಗೌರವ ಕೊಡುವ ಕೆಲಸವನ್ನು ಮಾಡಿದ್ದರು ಆದರೆ ಇವತ್ತು ಬ್ರಹ್ಮಶ್ರೀ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿದರು.

ನಾರಾಯಣಗುರು ಸ್ಥಾಪಿಸಿದ ಕುದ್ರೋಳಿ ಕ್ಷೇತ್ರದಲ್ಲಿ ಮಾಡಬಹುದಿತ್ತು ಅದನ್ನು ಮಾಡಿಲ್ಲ . ಈ ಹಿಂದೆ ಸರಕಾರದ ವತಿಯಿಂದ ಕಾರ್ಯಕ್ರಮ ನಡೆದರೂ ಸಿದ್ದರಾಮಯ್ಯನವರನ್ನು ಬಿಟ್ಟು ಯಡಿಯೂರಪ್ಪ , ಸಿಎಂ ಬೊಮ್ಮಯ್ಯ ಯಾಗಲಿ ಈ ಬ್ರಹ್ಮಶ್ರೀ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.  ಹೀಗಾಗಿ ಬಿಜೆಪಿಯವರು ಸರಣಿ ಅಪಮಾನವನ್ನು ಬ್ರಹ್ಮ ಶ್ರೀಗಳಿಗೆ ಮಾಡಿದ್ದಾರೆ ಎಂದು ದೂರಿದರು ಸ್ತಬ್ಧಚಿತ್ರ ತಿರಸ್ಕಾರ ಮಾಡಿದರು ಹತ್ತನೇ ತರಗತಿ ಪುಸ್ತಕದಲ್ಲಿ ಪಾಠ ಕೈಬಿಟ್ಟರು ಹೀಗೆ ಸರಣಿ ಹವಾಮಾನ ಮಾಡಿಕೊಂಡು ಬಂದರು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು