ಪುತ್ತೂರು: ಶತ್ರುನಿಗ್ರಹ ಕ್ಷೇತ್ರವೆಂದೇ ಹೆಸರುವಾಸಿಯಾದ ಶ್ರೀ ತಲೆಬೈಲು ನರಸಿಂಹ ದೇವರ ಮಠಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರ ಪತ್ನಿ ಶೈಲಜಾ ರೈ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಕ್ಷೇತ್ರದ ಮಂಜುನಾಥ್ ಉಡುಪ ಅವರು ಅನುಗ್ರಹ ಪ್ರಾರ್ಥನೆ ಸಲ್ಲಿಸಿದರು. ರಮಾನಾಥ ರೈ ಪುತ್ರಿ ಚರಿಷ್ಮಾ ರೈ, ಕೆಪಿಸಿಸಿ ಮಹಿಳಾ ಸಮಿತಿಯ ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾ ಪಕಳ ಮತ್ತು ವೀಣಾ ಉಪಸ್ಥಿತರಿದ್ದರು.