ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿರುವುದು ಉತ್ತಮ ಕೆಲಸ, ಒಂದು ಕಾಲದಲ್ಲಿ ರಕ್ತದಾನ ಒಬ್ಬರ ಜೀವ ಉಳಿಸುತ್ತದೆ ಎನ್ನುತ್ತಿದ್ದು ಪ್ರಸ್ತುತ ನಾಲ್ಕು ಮಂದಿಯ ಜೀವಕ್ಕೆ ಪ್ರಯೋಜನ ಆಗುತ್ತಿದೆ.
ಇದು ಕೂಡಾ ಸಾಮಾಜಿಕ ಸೇವೆಯಾಗಿದೆ ಎಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕ ಕೆ. ಕೃಷ್ಣಕುಮಾರ್ ಪೂಂಜಾ ಹೇಳಿದರು.
ಅವರು ಸೆ.14ರಂದು ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಹುಟ್ಟು ಹಬ್ಬದ ಅಂಗವಾಗಿ ಪಾಣಿಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು. ಬಳಿಕ ಮಾತನಾಡಿ ನಾನು ಯಾವುದೇ ಕಠಿಣ ಸಂದರ್ಭ ಎದುರಾದರೂ ಪ್ರಾಮಾಣಿಕತೆಯಲ್ಲಿ ರಾಜಿ ಎಲ್ಲಾ ಸಂದರ್ಭಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಕಾರ್ಯಕರ್ತರು ನನ್ನ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ, ಇದು ಖುಷಿತಂದಿದೆ ಎಂದರು.
ಇದೇ ಸಂದರ್ಭ ಬ್ಲಾಕ್ ಕಾರ್ಯಕರ್ತರಿಂದ ರೈಗಳಿಗೆ ಬೃಹತ್ ಗಾತ್ರದ ಮಾಲಾರ್ಪಣೆ, ಬಂಟ್ವಾಳ ಬ್ಲಾಕ್ ಪದಾಧಿಕಾರಿಗಳಿಂದ ಹೂಗುಚ್ಛಗಳ ಸಮರ್ಪಣೆ ನಡೆಯಿತು. ಜಿಲ್ಲಾ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ರೈಗಳು ಒಬ್ಬ ಮುತ್ಸದಿಯಾಗಿದ್ದು, ಜನಪರ ರಾಜಕಾರಣಿ, ಮಾದರಿ ನೇತಾರ ಎಂದು ಅಭಿನಂದಿಸಿದರು.
ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಬಿ. ಪದ್ಮಶೇಖರ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಕ್ಷದ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಜಯಂತಿ ಪೂಜಾರಿ, ಅಬ್ಬಾಸ್ ಅಲಿ, ಸಿದ್ದೀಕ್ ಮಂಜೇಶ್ವರ, ಆಲ್ಬರ್ಟ್ ಮಿನೇಜಸ್, ಸುಭಾಶ್ಚಂದ್ರ ಶೆಟ್ಟಿ , ಕುಸುಮಾಧರ್, ಜನಾರ್ದನ ಚೆಂಡ್ತಿಮಾರ್, ಜೆಸಿಂತಾ ಡಿ.ಸೋಜ, ಮಲ್ಲಿಕಾ ವಿ ಶೆಟ್ಟಿ, ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ಪೂಂಜರಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಹರ್ಷದ್ ಸರವು ವಂದಿಸಿದರು.