News Karnataka Kannada
Thursday, May 02 2024
ಮಂಗಳೂರು

ಪುತ್ತೂರು: ಬೆಳೆವಿಮೆ ಸಾಫ್ಟ್ ವೇರ್ ದೋಷಕ್ಕೆ ಶಾಸಕರಿಂದ ಪರಿಹಾರ

Mla's solution to crop insurance software glitch
Photo Credit : News Kannada

ಪುತ್ತೂರು: ಬೆಳೆವಿಮೆ ಸಾಫ್ಟ್ ವೇರ್ ನಲ್ಲಿ ರೈತರ ದಾಖಲೆ ಎಂಟ್ರಿ ಸಂದರ್ಭ ಎದುರಾಗುತ್ತಿದ್ದ ತಾಂತ್ರಿಕ ದೋಷವನ್ನು ಪರಿಹರಿಸುವಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಬೆಳೆವಿಮೆ ಸಾಫ್ಟ್ವೇರಿಗೆ ದಾಖಲೆಗಳ ನೋಂದಣಿ ಮಾಡುವಾಗ, 3-4 ಸರ್ವೆ ನಂಬರ್ ಬದಲಿಗೆ ಒಂದು ಸರ್ವೆ ನಂಬರನ್ನು ಮಾತ್ರ ಆಯ್ಕೆ ಮಾಡಲು ಆಗುತ್ತಿತ್ತು. ಅಂದರೆ ರೈತರ ಒಂದು ಸರ್ವೆ ನಂಬರ್ ಬಿಟ್ಟು, ಉಳಿದ ಸರ್ವೆ ನಂಬರ್ ಗಳು ದಾಖಲಾಗುತ್ತಿರಲಿಲ್ಲ. ಮಾತ್ರವಲ್ಲ, ಆಧಾರ್ ಮತ್ತು ಆರ್.ಟಿ.ಸಿ. ಮತ್ತು ಆಧಾರದಲ್ಲಿ ಹೆಸರಿನಲ್ಲಿ ಸಣ್ಣ ಲೋಪಗಳಿದ್ದರೂ, ಟ್ಯಾಲಿ ಬರುತ್ತಿರಲಿಲ್ಲ. ಇದೇ ರೀತಿಯ ಹಲವಾರು ತಾಂತ್ರಿಕ ತೊಂದರೆ ಎದುರಾಗುತ್ತಿತ್ತು.

ಇದರ ಬಗ್ಗೆ ಶಾಸಕ ಸಂಜೀವ ಮಠಂದೂರು ಅವರು ಸರಕಾರದ ಗಮನ ಸೆಳೆದು, ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು ಶಾಸಕರನ್ನು ಅಭಿನಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು