ಬೆಳ್ತಂಗಡಿ: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು ನದಿ, ಹಳ್ಳಗಳು ತುಂಬಿ ಹರಿಯತೊಡಗಿವೆ. ಮಳೆಗಾಲದ ಸಂಪೂರ್ಣ ಚಿತ್ರಣ ಜನರಿಗೆ ಸಿಗುತ್ತಿದೆ.
ಕಳೆದೆರಡು ದಿನಗಳಿಂದ ಮಳೆ ಸತತ ಬೀಳುತ್ತಿದ್ದು ತಾಲೂಕಿನ ಪಲ್ಗುಣಿ, ನೇತ್ರಾವತಿ, ಸೋಮಾವತಿ, ಮೃತ್ಯುಂಜಯ, ಕಪಿಲೆ, ನೆರಿಯ ಅಣಿಯೂರು ಹೊಳೆಗಳು ತುಂಬಿ ಹರಿಯತೊಡಗಿವೆ. ಆದರೆ ಅವು ಯಾವುವೂ ಅಪಾಯದ ಮಟ್ಟವನ್ನು ಮೀರದಿರುವುದು ಸಮಾಧಾನ ತಂದಿದೆ.
ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ, ನೆರಿಯಾ, ದಿಡುಪೆ ಸುತ್ತಲಿನ ಅರಣ್ಯ ಪ್ರದೇಶದ ಜನರಲ್ಲಿ ಸುಪ್ತವಾದ ಆತಂಕ ಮೂಡಿಸಿದೆ. ಸತತ ಮಳೆ ಧರೆಗೆ ಸುರಿಯುತ್ತಿರುವಾಗ 2019 ರಲ್ಲಿ ಆದ ಮಹಾಪೂರ ಮತ್ತು ಗುಡ್ಡಜರಿತದ ದೃಶ್ಯಗಳು ಕಣ್ಣಮುಂದೆ ಬಂದಾಗ ಸಹಜವಾಗಿ ನಿಲ್ಲುತ್ತಿವೆ.