ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ನೇತ್ರಾವತಿ ನದಿ ನೀರಿನಮಟ್ಟದಲ್ಲಿ ಏರಿಕೆಯಾಗಿದೆ. ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಹರಿವು ಹೆಚ್ಚಳವಾಗಿದೆ.
ಬೆಳಗ್ಗೆ 5.2 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ, ಮಳೆ ಜಾಸ್ತಿಯಾಗತೊಡಗಿದಂತೆ 5.5 ಮೀಟರ್ ಗೇರಿದ್ದರೆ, ಸಂಜೆ 6.5 ಮೀಟರ್ ನಲ್ಲಿ ಹರಿಯುತ್ತಿತ್ತು. ಹಲವೆಡೆಗಳಲ್ಲಿ ಮಳೆ ಹಾನಿ ಮುಂದುವರಿದಿದ್ದು, ನಾವೂರು ಗ್ರಾಮದಲ್ಲಿ ವಿಲ್ ಫ್ರೆಡ್ ಎಂಬವರ ಮನೆಗೆ ಹಾನಿಯಾಗಿದ್ದು,ಕೆದಿಲ ಗ್ರಾಮದ ತಾಳಿಪಡ್ಪು ಎಂಬಲ್ಲಿ ಮಜಿದ್ ಎಂಬವರ ಮನೆಯ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ.