News Karnataka Kannada
Sunday, May 05 2024
ಮಂಗಳೂರು

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ

ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ಬಿಜೆಪಿ ಅಭ್ಯರ್ಥಿ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬ್ರಿಜೇಶ್ ಚೌಟ ಹಿಂದುಳಿದ ಸಮಾಜದವರನ್ನ ಸೈಡ್ ಲೈನ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಧ ಮಂಗಳೂರಿನಲ್ಲಿ ಬಿಲ್ಲವ ಸಂಘಟನೆಗಳಿಂದ ತುರ್ತು ಸಭೆ ಕರೆಯಲಾಗಿದೆ.
Photo Credit : NewsKarnataka

ಮಂಗಳೂರು : ಚುನಾವಣೆಗೆ ಕೆಲವೇ ಗಂಟೆಗಳ ಮುನ್ನ ಬಿಜೆಪಿ ಅಭ್ಯರ್ಥಿ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬ್ರಿಜೇಶ್ ಚೌಟ ಹಿಂದುಳಿದ ಸಮಾಜದವರನ್ನ ಸೈಡ್ ಲೈನ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಧ ಮಂಗಳೂರಿನಲ್ಲಿ ಬಿಲ್ಲವ ಸಂಘಟನೆಗಳಿಂದ ತುರ್ತು ಸಭೆ ಕರೆಯಲಾಗಿದೆ.

ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ಅಸಮಾಧಾನ ತೋರಿದ್ದು, ಈ ಸಭೆಯಲ್ಲಿ ಬಿರುವೆರ್ ಕುಡ್ಲ ,ಯುವವಾಹಿನಿ ,ಗೆಜ್ಜೆಗಿರಿ ಸಂಘಟನೆಯ ಬಿಲ್ಲವ ಮುಖಂಡರು ಭಾಗಿಯಾಗಿದ್ದಾರೆ. ಇದೀಗ ನಳಿನ್ ಕುಮಾರ್ ಕಟೀಲ್ V/S ಬ್ರಿಜೇಶ್ ಚೌಟ ಬಣ ರಾಜಕೀಯದ ಮತ್ತೆ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿರುವೆರ್ ಕುಡ್ಲ ವಿರುದ್ಧ ಅವಹೇಳನಕಾರಿ ಬರಹ ಕುರಿತು ಆರೋಪಿಸಲಾಗಿದೆ.

ಬಿರುವೆರ್ ಕುಡ್ಲ ಸಂಘಟನೆ ಸಂಸ್ಥಾಪಕ ಉದಯ ಪೂಜಾರಿ ಬಲ್ಲಾಳ್ ಭಾಗ್ ಮಾತನಾಡಿ,
ಇಲ್ಲಿ ಬಿಲ್ಲವ ಸಮುದಾಯದವರು ಸೇರಿದ್ದೇವೆ ,ನಮ್ಮನ್ನ ಯಾಕೆ ಸೆಡ್ ಲೈನ್ ಮಾಡುತ್ತಿದ್ದಾರೆ ಗೊತ್ತಿಲ್ಲ.ನಳಿನ್ ಕುಮಾರ್ ಕಟೀಲ್ ಜೊತೆಗಿದ್ದವರನ್ನು ದೂರವಿಟ್ಟಿದ್ದಾರೆ ಬಿರುವೆರ್ ಕುಡ್ಲ ಸಂಘಟನೆಯಿಂದ ಎಷ್ಟು ವೋಟ್ ಇದೆ ಎಂದು ಕೇಳುತ್ತಿದ್ದರೆ ಬ್ರಿಜೇಶ್ ಚೌಟ ಅವರೇ ಇದೆ ಮಾತನ್ನ ನೀವು ಎಲೆಕ್ಷನ್ ಮುಂಚೆ ಹೇಳಬೇಕಿತ್ತು ಆಗನಾವೇನು ನಮ್ಮ ಸಮುದಾಯದ ಶಕ್ತಿ ಏನು ಅನ್ನೋದನ್ನ ತೋರಿಸುತ್ತಿದ್ದೆವು ಎಂದು ಗುಡುಗಿದ್ದಾರೆ.

ಬ್ರಿಜೇಶ್ ಚೌಟಾಗಿಂತ ನಳಿನ್ ಕುಮಾರ್ ಕಟೀಲ್ ನಮಗೆ ಆಗಬಹುದಿತ್ತು ಅಂತ ಜನ ಹೇಳ್ತಾಯಿದ್ದಾರೆ. ಮೋದಿಗೋಸ್ಕರ ನಮ್ಮ ಕಾರ್ಯಕರ್ತರು ದುಡಿತಾ ಇದ್ದಾರೆ ಇದೀಗ ಇದು ಒಬ್ಬನದ್ದೇ ಪಕ್ಷದ ರೀತಿ ಆಗಿದೆ.ಮುಂದೆ ಎರಡು ಎಂಎಲ್ಎ ಗಳನ್ನ ಬದ್ಲಾಯಿಸ್ತಾರೆ.ವೇದವ್ಯಾಸ್ ಕಾಮತ್ ಹಾಗು ಭರತ್ ಶೆಟ್ಟಿಯವರನ್ನ ಬದಲಾಯಿಸುತ್ತಾರೆ ಎಂದು ಟೀಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು