News Karnataka Kannada
Tuesday, April 30 2024
ಮಂಗಳೂರು

ದ.ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ : ಹಾಗಾಗಿ ಮೋದಿ ಎಂಟ್ರಿ !!

ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ ಆಗಿದೆ. ಪದ್ಮರಾಜ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಕಾಗಿದ್ದಾರೆ. ಇದೆ ಕಾರಣಕ್ಕೆ ಬಿಜೆಪಿ ಮೋದಿ ಕರೆ ತರಲು ಮುಂದಾಯಿತೇ ಎಂದು ಕೆಲ ರಾಜಕೀಯ ಪಂಡಿತರ ಮಾತು.
Photo Credit : NewsKarnataka

ಮಂಗಳೂರು: ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ ಆಗಿದೆ. ಪದ್ಮರಾಜ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಕಾಗಿದ್ದಾರೆ. ಇದೆ ಕಾರಣಕ್ಕೆ ಬಿಜೆಪಿ ಮೋದಿ ಕರೆ ತರಲು ಮುಂದಾಯಿತೇ ಎಂದು ಕೆಲ ರಾಜಕೀಯ ಪಂಡಿತರ ಮಾತು.

ಮಂಗಳೂರಿನಲ್ಲಿ ಪದ್ಮ ರಾಜ್ V/S ಬ್ರಿಜೇಶ್ ಬದಲು ಪದ್ಮರಾಜ್ ಪೂಜಾರಿ V/S ನರೇಂದ್ರ ಮೋದಿ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮೋದಿ ಬಂದ ಮೇಲೆಯೇ ಬಿಜೆಪಿ ಅಭ್ಯರ್ಥಿಯ ಭವಿಷ್ಯ ಬದಲಾಗಬಹುದು ಅನ್ನೋ ಲೆಕ್ಕಾಚಾರ. ಬಿಜೆಪಿಗರಿಗೆ ತಲೆನೋವಾದ ಬ್ರಿಜೇಶ್ ಚೌಟ ಪ್ರಚಾರ ಶೈಲಿ. ಯಾಕೆಂದರೇ ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯರದ್ದೇ ಸದ್ದು ಜೋರಾಗಿದೆ. ಹೋದಲ್ಲಿ ಬಂದಲ್ಲಿ ಪದ್ಮರಾಜ್ ಹವಾ ಎದ್ದು ಕಾಣುತ್ತಿದೆ.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಎಲ್ಲಿದ್ದಾರೆ?ಎಂದು ದಕ್ಷಿಣ ಕನ್ನಡದ ಜನ ಕೇಳುತ್ತಿದ್ದಾರೆ. ಅಬ್ಬರದ ಪ್ರಚಾರವಿಲ್ಲ, ಬಿರುಸಿನ ಮತ ಬೇಟೆಯಿಲ್ಲ ಚುನಾವಣೆ ಹೊತ್ತಲ್ಲೇ ಚೌಟ ಮಂಕಾಗಿದ್ದಾರೆ. ಇದೆ ಪರಿಸ್ಥಿತಿ ಮುಂದುವರೆದರೆ ಚೌಟ ಗೆಲುವಿನ ಗತಿಯೇನು?. ಬಿಜೆಪಿ ಅಭ್ಯರ್ಥಿಯ ಪ್ರಚಾರದ ಶೈಲಿಯಿಂದ ಕಾರ್ಯಕರ್ತರಿಗೂ ನಿರುತ್ಸಾಹ ಬಂದಿದೆ.

ಹೀಗಾಗಿ ಕೇವಲ ಮೋದಿ ಹಾಗು ಕೇಂದ್ರದ ನಾಯಕತ್ವವನ್ನೇ ಕ್ಯಾಪ್ಟನ್ ಅವಲಂಬಿಸಿಕೊಂಡಿದ್ದಾರೆ. ಕ್ಯಾಪ್ಟನ್ ಉತ್ಸಾಹದಿಂದ ಮತಬೇಟೆ ನಡೆಸದೆ ಹೋದರೆ ಗೆಲುವು ಕಷ್ಟ ಸಾಧ್ಯ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು