ಮಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ಸಿಗುವ ಸಾಧ್ಯತೆ ವಿಚಾರವಾಗಿ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.ಮಾಧ್ಯಮದಲ್ಲಿ ಸುದ್ದಿ ಓಡಾಡ್ತಾ ಇದೆ, ಅದನ್ನಷ್ಟೇ ನಾನು ನೋಡಿದ್ದೇನೆ. ನಾನು ಈಗ ಎಂಎಲ್ ಸಿಯಾಗಿ ಕೆಲಸ ಮಾಡ್ತಾ ಇದೀನಿ,ಪಾರ್ಟಿಯವರು ಏನ್ ನಿರ್ದೇಶನ ಕೊಡ್ತಾರೋ ಗೊತ್ತಿಲ್ಲ ಈವರೆಗೆ ನನ್ನನ್ನ ಯಾರೂ ಸಂಪರ್ಕ ಮಾಡಿಲ್ಲ ಎಂದರು.
ಪಾರ್ಟಿಯ ಸಂಘಟನಾತ್ಮಕ ವಿಚಾರದಲ್ಲಿ ದೆಹಲಿ, ಬೆಂಗಳೂರಿನಿಂದ ಫೋನ್ ಬರುತ್ತೆ ಆದರೆ ಇದುವರೆಗೆ ಟಿಕೆಟ್ ವಿಚಾರವಾಗಿ ಯಾವುದೇ ಕರೆ ನನಗೆ ಬಂದಿಲ್ಲ,ಪಕ್ಷ ಏನ್ ಹೇಳುತ್ತೋ ನೋಡಿಕೊಂಡು ನಾನು ಹೇಳ್ತೇನೆ. ಸಹಜವಾಗಿಯೇ ಪಕ್ಷ ಎಲ್ಲವನ್ನೂ ನೋಡಿಕೊಂಡು ನಿರ್ಧಾರ ಮಾಡುತ್ತೆ ,ಅದೇನ್ ನಿರ್ದೇಶನ ನೀಡ್ತಾರೆ ಅಂತ ನನಗೆ ಖಚಿತವಾಗಿ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.