News Karnataka Kannada
Sunday, April 28 2024
ಮಂಗಳೂರು

ಉಪ್ಪಿನಂಗಡಿ: ಜೀವನದಿ ನೇತ್ರಾವತಿ ನೀರಿನ ಹರಿವು ಇಳಿಮುಖ

Netravathi, the lifeline of the coast, dried up in Uppinangady
Photo Credit : News Kannada

ಉಪ್ಪಿನಂಗಡಿ: ಜಿಲ್ಲೆಯ ಜೀವ ನದಿ  ನೇತ್ರಾವತಿಯು ಹರಿವಿನಲ್ಲಿ ಇಳಿಮುಖವಾಗಿದ್ದು, ನೀರಿನ ಕೊರತೆ ಎದುರಾಗುವ ಭೀತಿ ಎದುರಾಗಿದೆ.

ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಹರಿವು ಕಡಿದುಕೊಂಡಿತ್ತು. ಸನಿಹದಲ್ಲೇ ಕುಮಾರಧಾರಾ ನದಿ ಸಂಗಮಿಸಿದ ಬಳಿಕ ನೇತ್ರಾವತಿ ಮತ್ತೆ ಹರಿಯುತ್ತಾಳಾದರೂ ಕುಮಾರಧಾರಾ ಸಂಗಮಿಸುವ ಮುನ್ನವೇ ನೇತ್ರಾವತಿ ನದಿಯ ನೀರು ಬತ್ತಿ ಹೋಗಿ ನದಿ ಬರಡಾಗಿದೆ.

ಬಹುತೇಕ ಶ್ರದ್ಧಾಳುಗಳು ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಬಂಧುಗಳ ಅಸ್ಥಿ ವಿಸರ್ಜನೆ ಮಾಡಿ ಪಿಂಡ ಪ್ರದಾನಾದಿ ಕಾರ್ಯಗಳನ್ನು ನೆರವೇರಿಸಿದ ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ನದಿ ಬತ್ತಿ ಹೋದ ಕಾರಣಕ್ಕೆ ಪುಣ್ಯ ತೀರ್ಥ ಸ್ನಾನಕ್ಕೆ ಅಡಚಣೆಯಾಗಿದೆ.

ಕುಮಾರಧಾರಾ ಸಂಗಮಿಸಿದ ಬಳಿಕ ಸ್ನಾನ ಮಾಡುವ ಅವಕಾಶವಿದೆಯಾದರೂ ಸದ್ರಿ ಸ್ಥಳವು ಅಪಾಯಕಾರಿಯಾಗಿರುವುದರಿಂದ ಭಕ್ತರ ಅನುಕೂಲತೆಗಾಗಿ ಸಂಗಮ ಸ್ಥಳದಲ್ಲಿ ಮರಳು ತೆಗೆದು ಹೊಂಡ ಮಾಡಿ ಅಲ್ಲಿ ನೀರು ನಿಲ್ಲುವಂತೆ ತಾತ್ಕಾಲಿಕ ವ್ಯವಸ್ಥೆ  ಕಲ್ಪಿಸಲಾಗಿದೆ. ಪರಿಸರದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆಯಾದರೂ ಬಳಿಕ ವ್ಯಕ್ತಗೊಂಡ ವಾತಾವರಣ ದಲ್ಲಿನ ಭಾರೀ ಉಷ್ಣತೆಯಿಂದಾಗಿ ಜಲ ಮೂಲಗಳೆಲ್ಲವೂ ಬತ್ತಿ ಹೋಗತೊಡಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು