ಬಂಟ್ವಾಳ: ಇತ್ತೀಚೆಗೆ ಬರಿಮಾರ್ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ರಕ್ಷಣ್ ನೇತ್ರಾವತಿ ನದಿಗೆ ಆಕಸ್ಮಿಕ ಬಿದ್ದು ಮೃತಪಟ್ಟಿದ್ದು, ರಕ್ಷಣ್ ಪೋಷಕರಾದ ರಾಮ ನಾಯ್ಕ್ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ 5 ಲಕ್ಷದ ಪರಿಹಾರ ಧನವನ್ನು ಶನಿವಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ,ಬರಿಮಾರು ಗ್ರಾ.ಪಂ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಸದಾಶಿವ, ಸದಸ್ಯರಾದ ಜಗದೀಶ್, ಪುಷ್ಪಲತಾ, ಎಸ್.ಟಿ ಮೋರ್ಚಾ ಅಧ್ಯಕ್ಷರಾದ ರಾಮ ನಾಯ್ಕ್, ಪ್ರ.ಕಾರ್ಯದರ್ಶಿ ಯಶವಂತ್ ನಗ್ರಿ ಉಪಸ್ಥಿತರಿದ್ದರು.