ಮಂಗಳೂರು: ಚಾಮರ ಫೌಂಡೇಶನ್ ಲಾಂಛನದಲ್ಲಿ ಆರು ದಿನಗಳ ಉಚಿತ ಬೇಸಿಗೆ ಶಿಬಿರಕ್ಕೆ 2022 ರ ಏಪ್ರಿಲ್ 11 ರಂದು ಮಂಗಳೂರಿನ ಬೈಕಂಪಾಡಿಯ ಮೊಗವೀರ ಸಮುದಾಯಭವನದಲ್ಲಿ ಚಾಲನೆ ದೊರೆಯಿತು.
ಮಿಥುನ್ ಶ್ರಿಯಂ, ರಾಜೀವ ಕಾಂಚನ್, ಶಿರಿಶ್ ಕುಮಾರ್ ಹಾಗು ರಚನಾ ಉಪಸ್ಥಿತರಿದ್ದರು. ಸುಮಾರು 130 ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಈ ಬೇಸಿಗೆ ಶಿಬಿರವನ್ನು ವಿಶೇಷವಾಗಿ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗಾಗಿ ನಡೆಸಲಾಗುತ್ತದೆ. ಚಾಮರ ಫೌಂಡೇಶನ್ 3 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಿದೆ. ಮೈಮ್ ರಾಮದಾಸ್, ನವೀನ್ ಪಿಲಾರ್, ವಿಸ್ಮಯ ವಿನಾಯಕ್, ಛಾಯಾ, ಅರವಿಂದ್, ಮಿಥುನ್ ಶ್ರೀಯಾನ್ ಮುಂತಾದ ಮಂಗಳೂರಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಶಿಬಿರದ ಸಮಾರೋಪ ಸಮಾರಂಭ ಏಪ್ರಿಲ್ 16 ರಂದು 11. 30ಕ್ಕೆ ನಡೆಯಲಿದೆ.