ಮಂಗಳೂರು: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ, ಆಯುಷ್ ಸಚಿವಾಲಯ, ಭಾರತ ಸರ್ಕಾರ ಜಂಟಿಯಾಗಿ ಪ್ರಕೃತಿ ವಿಜ್ಞಾನ – ಪ್ರಕೃತಿ ಚಿಕಿತ್ಸೆ ವಿಜ್ಞಾನದ ಕುರಿತು ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಮಾರ್ಚ್ 11 ಮತ್ತು 12 ರಂದು ಯೆನೆಪೋಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿತ್ತು.
ಮಾರ್ಚ್ 11 2024 ರಂದು ಉದ್ಘಾಟನೆ ನಡೆಯಿತು. ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕಿ ಡಾ.ಪ್ರೊ.ಕೆ ಸತ್ಯ ಲಕ್ಷ್ಮಿ ಗೌರವ ಅತಿಥಿಯಾಗಿ ಆಗಮಿಸಿದ್ದರು ಅವರು ಪ್ರಕೃತಿಚಿಕಿತ್ಸಕ ವೈದ್ಯರಾಗಿ ರೋಗನಿರ್ಣಯದ ಮಹತ್ವದ ಕುರಿತು ಮಾತನಾಡಿದರು.
ಡಾ.ಶಾಮ್ ಎಸ್ ಭಟ್, ಡೀನ್ ಯೆನೆಪೋಯ ದಂತ ಮಹಾವಿದ್ಯಾಲಯ ಇವರು ಅತಿಥಿಯಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಬಗ್ಗೆ ತಿಳುವಳಿಕೆ ನೀಡಿದರು. ಹಾಗೂ ಪ್ರೊ.ಡಾ.ಬಿ. ಯೆಚ್ ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಡಾ ಪುನೀತ್ ರಾಘವೇಂದ್ರ ಕೆ ಆರ್, ಪ್ರಾಂಶುಪಾಲರು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಡಾ.ಪದ್ಮಶ್ರೀ ಧನ್ಯವಾದ ಸಮರ್ಪಿಸಿದರು.