News Karnataka Kannada
Saturday, April 27 2024
ಮಂಗಳೂರು

ಮುಲ್ಕಿ: ಕಿರು ಸೇತುವೆ ಮರು ನಿರ್ಮಾಣಕ್ಕೆ ಪರಿಹಾರವನ್ನು ಒದಗಿಸಿಕೊಡುವಂತೆ ಗ್ರಾಮಸ್ಥರ ಆಗ್ರಹ

Nk
Photo Credit : By Author

ಮುಲ್ಕಿ: ಕಳೆದ 1ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ನೆರೆತುಂಬಿ ಮುಲ್ಕಿ ತಾಲ್ಲೂಕಿನ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಪಠ್ಯ ಸಂಪರ್ಕಿಸುವ ಕಾಲುದಾರಿಯ ಕಿರು ಸೇತುವೆ ಸಂಪರ್ಕ ಕಡಿತಗೊಂಡಿದೆ.

ಸಂಪರ್ಕ ಕಡಿತದಿಂದ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.ಹತ್ತಿರದಲ್ಲಿ ಶ್ರೀಲಕ್ಷ್ಮಿಜನಾರ್ದನ ದೇವಸ್ಥಾನವಿದ್ದು ಪಠ್ಯ ಪರಿಸರದ ಹಲವಾರು ಭಕ್ತರು ದೇವಸ್ಥಾನಗಳಿಗೆ ಆಗಮಿಸುತ್ತಿದ್ದು ಈ ಕಿರು ಸೇತುವೆಯ ಮೂಲಕ ಹಾದು ಹೋಗಬೇಕಿದೆ.

ಇನ್ನೂ ಏಳಿಂಜೆ ದಾಮಸ್ ಕಟ್ಟೆ ಶಾಲೆಗೆ ಬರುವ ಮಕ್ಕಳು ಇದೇ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಬರ್ತಿದ್ದು ಭಾರಿ ಮಳೆ ಬಂದರೆ ಸಾಕು ಸೇತುವೆ ಕುಸಿತದಿಂದ ಸುತ್ತು ಬಳಸಿಕೊಂಡು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನು ಈ ಕಿರು ಸೇತುವೆ ಅಲ್ಲಲ್ಲಿ ಬಿರುಕುಬಿಟ್ಟಿದ್ದು ಸೇತುವೆ ಕುಸಿದು ಕೆಲವು ವರ್ಷಗಳಾದರೂ ನೂತನ ಸೇತುವೆ ನಿರ್ಮಾಣ ಇನ್ನೂ ಕಾರ್ಯಗತಗೊಂಡಿಲ್ಲ ಈ ನಡುವೆ ಕುಸಿತವಾದ ಸೇತುವೆಯು ಇನ್ನೊಂದು ಪಾಶ್ಚಾತ್ಯ ಜಲಾವೃತವಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

ಕಳೆದ 4ವರ್ಷಗಳಿಂದ ಕಿರು ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು. ಕೂಡಲೇ ಸ್ಥಳೀಯ ಪ್ರತಿನಿಧಿಗಳು ತಹಸೀಲ್ದಾರ್ ಹಾಗೂ ಶಾಸಕರು ಆಗಮಿಸಿ ಕಿರು ಸೇತುವೆ ಮರು ನಿರ್ಮಾಣದ ಬಗ್ಗೆ ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು