ಮುಲ್ಕಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಕಾರವಾರ, ಮುಲ್ಕಿ ಶಾಖೆ ವತಿಯಿಂದ ಸಿ.ಎಸ್.ಐ ಬಾಲಕಿಯರ ಬಾಲಾಮಂದಿರ ಮುಲ್ಕಿ ಇಲ್ಲಿನ ಮಕ್ಕಳಿಗೆ ಸೋಲಾಪುರ್ ಚಾದರ ಹಾಗೂ ಸಿಹಿತಿಂಡಿ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ಸಿ.ಎಸ್.ಐ ಯುನಿಟಿ ಚರ್ಚ್ನ ಮುಖ್ಯಸ್ತರಾದ ರೆ| ಸ್ಟೀವನ್ ಸರ್ವತೋಮ್, ಈ ಸೈಂಟ್ ಮಿಲಾಗ್ರೀಸ್ ಸಂಸ್ಥೆಯು ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇದು ಮಾದರಿ ಕಾರ್ಯ. ಸಂಘದಿಂದ ಇನ್ನಷ್ಟು ಸೇವಾ ಕೈಂಕರ್ಯಗಳು ನಡೆಯಲಿ ಎಂದು ಶುಭಹಾರೈಸಿದರು.
ಸೈಂಟ್ ಮಿಲಾಗ್ರಿಸ್ ಸಂಸ್ಥೆಯು 8 ಜಿಲ್ಲೆ ಗಳಲ್ಲಿ 111 ಶಾಖೆಗಳನ್ನು ಹೊಂದಿದ್ದು ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಳ್ಳಲು ಉತ್ತೇಜಕರಾಗಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಾದ ಜಾರ್ಜ್ ಫೆರ್ನಾಂಡಿಸ್ ರವರ ಮೂಲಕ ಈ ಮಾದರಿ ಕಾರ್ಯವನ್ನು ಕೈಗೊಂಡಿದೆ. ಮಂಗಳೂರು ಹಾಗು ಉಡುಪಿ ವಿಭಾಗದ ಅಭಿವೃದ್ಧಿ ವ್ಯವಸ್ಥಾಪಕರಾದ ಜೀವನ್ ಡಿ’ಸೋಜ ಇವರು ಹೇಳಿದರು.
ಎಲ್.ಐ.ಸಿ ಮುಲ್ಕಿ ಶಾಖೆಯ ವ್ಯವಸ್ಥಾಪಕರಾದ ಕೆ. ಪ್ರಕಾಶ್, ಸೈಂಟ್ ಮಿಲಾಗ್ರಿಸ್ ಸಂಸ್ಥೆ ಮುಲ್ಕಿ ಶಾಖೆಯ ಸದಸ್ಯರಾದ ಅಂತೋನಿ ಸ್ಟಾನಿ ಕ್ರಾಸ್ತ ಹಾಗೂ ಶಾಖಾ ವ್ಯವಸ್ಥಾಪಕರಾದ ಜೈಸನ್ ಮೊರಸ್ ಹಾಗೂ ಪಡುಬಿದ್ರಿ ಶಾಖಾ ವ್ಯವಸ್ಥಾಪಕರಾದ ಜ್ಯೋತಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೈಂಟ್ ಮಿಲಾಗ್ರಿಸ್ ಸಂಸ್ಥೆ ಮುಲ್ಕಿ ಶಾಖೆಯ ಪ್ರತೀಕ್ಷಾ ಸ್ವಾಗತಿಸಿ, ರುಶೇಲ್ ಮೆನೆಜೆಸ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಜೈಸನ್ ಮೊರಸ್ ವಂದಿಸಿದರು.