ಮಂಗಳೂರು: ಲಕ್ಷಾಂತರ₹ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ಇಬ್ಬರನ್ನೂ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದ ತಂಡ ಬಂಧಿಸಿದೆ.
ಪುತ್ತೂರು ಸರ್ವೆ ಗ್ರಾಮದ ಬಾವಿ ಕಟ್ಟೆ ನಿವಾಸಿಗಳಾದ ಪ್ರಮೋದ್ ಹಾಗೂ ಆತನ ಪತ್ನಿ ಸುಮತಿ ಯಾನೆ ಸುಮಾ ಬಂಧಿತ ಆರೋಪಿಗಳು. ವಿಟ್ಲ ಮುಡ್ನೂರು ದಂಬೆದಾರು ಮನೆಯಿಂದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆಲಸಕ್ಕಿದ್ದ ಪುತ್ತೂರು ಮೂಲದ ದಂಪತಿಗಳನ್ನು ಬಂಧಿಸಿದ್ದಾರೆ.
ಇವರಿಬ್ಬರು ದಂಬೆದಾರು ವಿನಯಚಂದ್ರ ನಾಯಕರವರ ಮನೆಯಲ್ಲಿ ಕೂಲಿ ಕೆಲಸ ಸಿಕ್ಕಿದ್ದು ಮನೆಯ ಬೆಡ್ ರೂಂನ ಕಪಾಟಿನಲ್ಲಿದ್ದ ಚಿನ್ನದ ಬ್ರಾಸ್ಲೇಟ್ 1ಚಿನ್ನದ ಲಕ್ಷ್ಮೀ ಚೈನ್ 1 ಚಿನ್ನದ ಪದಕ ಸಹಿತ ಚೈನು 1ಚಿನ್ನದ ಲಕ್ಷ್ಮೀ ಪದಕ ಸಹಿತ ಚೈನ್ 1ಚಿನ್ನದ ಉಂಗುರಗಳು 3ಒಟ್ಟು ತೊಂಬತ್ತ್ 8ಗ್ರಾಂ ಚಿನ್ನಾಭರಣಗಳು ಸದ್ಯ ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 1ಲಕ್ಷ ನಲವತ್ತೆಂಟು ಸಾವಿರ₹ಚಿನ್ನಾಭರಣ ಕಳವುಗೈದಿದ್ದಾರೆ.
ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ ಕಳವಾಗಿದ್ದ ತೊಂಬತ್ತ ಎಂಟ್ ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ .