News Karnataka Kannada
Wednesday, May 01 2024
ಮಂಗಳೂರು

ಕರ್ಣಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗಳ ಒಡಂಬಡಿಕೆ

MoU between Karnataka Bank, HDFC Life Insurance Company Limited
Photo Credit : News Kannada

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಗ್ರಾಹಕರಿಗೆ ಜೀವ ವಿಮಾ ಉತ್ಪನ್ನಗಳನ್ನು ನೀಡಲು ದೇಶದ ಪ್ರಮುಖ ಜೀವ ವಿಮಾ ಪೂರೈಕೆದಾರರಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್‌ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಈ ಒಡಂಬಡಿಕೆಯಿಂದಗಿ ಗ್ರಾಹಕರಿಗೆ ನವೀನ ಮತ್ತು ಗ್ರಾಹಕ-ಕೇಂದ್ರಿತ ಜೀವ ವಿಮಾ ಉತ್ಪನ್ನಗಳನ್ನು ವಿತರಿಸಲು ಇನ್ನಷ್ಟು ಅನುಕೂಲವಾಗಲಿದೆ.

ಕರ್ಣಾಟಕ ಬ್ಯಾಂಕ್‌ನ ಶತಮಾನದ ಸಮರ್ಥ ಬ್ಯಾಂಕಿಂಗ್ ಅನುಭವ ಮತ್ತು ಎಚ್‌ಡಿಎಫ್‌ಸಿ ಲೈಫ್‌ನ ಗುಣಮಟ್ಟದ ಜೀವ ವಿಮಾ ಉತ್ಪನ್ನಗಳನ್ನು ಒದಗಿಸುವಲ್ಲಿನ ಪರಿಣತಿಯನ್ನು ಜೊತೆಗೂಡಿಸುವ ಮೂಲಕ, ಈ ಸಹಯೋಗವು ಆರ್ಥಿಕ ಭದ್ರತೆ ಮತ್ತು ಜೀವರಕ್ಷಣಾ ವಿಮೆಯನ್ನು ಬಯಸುವ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ದೊರಕಿಸಿಕೊಡಲಿದೆ.

ಹೊಸ ಒಡಂಬಡಿಕೆಯ ಕುರಿತು ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀ ಶ್ರಿಕೃಷ್ಣನ್ ಎಚ್, “ನಮ್ಮ ಶತಮಾನೋತ್ಸವ ವರ್ಷದಲ್ಲಿ ನಾವು ಎಚ್‌ಡಿಎಫ್‌ಸಿ ಲೈಫ್‌ನೊಂದಿಗೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ. ಈ ಸಹಯೋಗವು ಗ್ರಾಹಕ ಸ್ನೇಹಿ ಆಗಿದೆ. ಎಲ್ಲಾ ವಿಧದ ಗ್ರಾಹಕರನ್ನು ತಲುಪುವಲ್ಲಿ ಇದು ಬ್ಯಾಂಕಿಗೆ ಸಹಕಾರಿಯಾಗಿದೆ.

ನಮ್ಮ ಬ್ಯಾಂಕಿನ ಗ್ರಾಹಕರಿಗೆ ಅವರ ಅಗತ್ಯಗಳಿಗೆ ಅನುಗುಣವಾದ ಜೀವಾವಿಮೆಯನ್ನು ಅವರಿಗೆ ಲಭ್ಯವಿರುವ ಹಣಕಾಸು ಪರಿಧಿಯಲ್ಲಿ ದೊರಕಿಸಿಕೊಡುವಲ್ಲಿ ನಮ್ಮ ಬದ್ಧತೆಯನ್ನು ಈ ಒಡಂಬಡಿಕೆ ತೋರಿಸುತ್ತದೆ. ಡಿಜಿಟಲ್ ನೆಟ್‌ವರ್ಕ್ ಮೂಲಕ ನಮ್ಮ ಗ್ರಾಹಕರು ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಸುರಕ್ಷತೆಯನ್ನು ಬಲಪಡಿಸುವ ನಮ್ಮ ಕಾಳಜಿಗೆ ಈ ಒಡಂಬಡಿಕೆ ಪೂರಕವಾಗಿದೆ” ಎಂದು ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್‌ನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಶ್ರೀ ಶೇಖರ್ ರಾವ್, ಎಚ್‌ಡಿಎಫ್‌ಸಿ ಲೈಫ್‌ನೊಂದಿಗಿನ ಈ ಒಡಂಬಡಿಕೆಯು ಖಂಡಿತವಾಗಿಯೂ ಕೆಬಿಎಲ್ ಗ್ರಾಹಕರಿಗೆ ಜೀವ ವಿಮಾ ಉತ್ಪನ್ನಗಳ ಆಯ್ಕೆಯಲ್ಲಿ ಅನುಕೂಲವಾಗಲಿದೆ. ಇದಲ್ಲದೆ, ಮುಖ್ಯವಾಗಿ ಗ್ರಾಹಕರಿಗೆ ಉತ್ತಮ ಅನುಭವವನ್ನು ದೊರಕಿಸಿಕೊಡುವಲ್ಲಿ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಎರಡೂ ಸಂಸ್ಥೆಗಳು ಬದ್ಧವಾಗಿವೆ. ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚು ಸುಲಭವಾಗಿ ಮತ್ತು ಗ್ರಾಹಕ ಸ್ನೇಹಿಯಾಗಿ ಒದಗಿಸಿಕೊಡುವಲ್ಲಿ ಈ ಒಡಂಬಡಿಕೆ ಅನುಕೂಲವಾಗಿದೆ” ಎಂದು ನುಡಿದರು.

ಒಡಂಬಡಿಕೆಯ ಕುರಿತು ಮಾತನಾಡಿದ ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪನಿಯ ವಕ್ತಾರರು, “ಕರ್ಣಾಟಕ ಬ್ಯಾಂಕ್‌ನೊಂದಿಗೆ ಪಾಲುದಾರರಾಗಿರುವುದು ನಮಗೆ ಅತೀವ ಸಂತೋಷವನ್ನು ನೀಡುತ್ತದೆ. ನಮ್ಮ ದೇಶದಲ್ಲಿ ಜೀವ ವಿಮೆಯ ವ್ಯಾಪ್ತಿಗೆ ಒಳಪಡದ ಅನೇಕ ಜನರಿದ್ದಾರೆ, ಅವರೆಲ್ಲರನ್ನೂ ಜೀವವಿಮಾ ವ್ಯಾಪ್ತಿಗೆ ಬರುವಂತೆ ಮಾಡಬೇಕಾಗಿದೆ. ಬ್ಯಾಂಕಾಶ್ಯೂರೆನ್ಸ್ ಪಾಲುದಾರಿಕೆಗಳನ್ನು ನಿರ್ವಹಿಸುವಲ್ಲಿ ನಮ್ಮ ಅಗಾಧ ಅನುಭವದೊಂದಿಗೆ, ನಾವು ತಂತ್ರಜ್ಞಾನದಲ್ಲಿ ಹೂಡಿಕೆಗಳನ್ನು ಹೆಚ್ಚಿಸುವ ಮೂಲಕ ಅತ್ಯುತ್ತಮ ವಿವಿಧ ಜೀವವಿಮಾ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಗ್ರಾಹಕರ ಅನುಕೂಲಕ್ಕಾಗಿ ಕರ್ಣಾಟಕ ಬ್ಯಾಂಕ್‌ನೊಂದಿಗೆ ಕೈಜೋಡಿಸಿ ಮುಂದುವರೆಯಲು ಉತ್ಸುಹಕರಾಗಿದ್ದೇವೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು