News Karnataka Kannada
Monday, April 29 2024
ಕ್ರೀಡೆ

ಆಸ್ಟ್ರೇಲಿಯಾ ಪಾಂಡವರ ‘ಅಸ್ತ್ರಗಳ’ ಶೇಖರಣಾ ಕೇಂದ್ರ ಅದಕ್ಕಾಗಿ ಭಾರತಕ್ಕೆ ಸೋಲು ಎಂದ ಕಾಟ್ಜು

Katju said that Australia is a storage center for the 'weapons' of the Pandavas, a defeat for India
Photo Credit : News Kannada

ಲಖನೌ: ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಸೋಲು ಕಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ನೀಡಿದ ಕಾರಣವೊಂದು ಭಾರಿ ಸಂಚಲನಕ್ಕೆ ಕಾರಣವಾಗಿದೆ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಲು ಮಹಾಭಾರತ ಕಾಲದ ಪಾಂಡವರ ಶಸ್ತ್ರಾಸ್ತ್ರ ಕಾರಣ ಎಂದಿರುವ ಮಾರ್ಕಂಡೇಯ ಕಾಟ್ಜು ವಿವರಣೆಯನ್ನೂ ನೀಡಿದ್ದಾರೆ. ಆಸ್ಟ್ರೇಲಿಯಾ ಮಹಾಭಾರತ ಕಾಲದಲ್ಲಿ ಪಾಂಡವರ ಅಸ್ತ್ರಗಳನ್ನು ಶೇಖರಿಸುವ ಸ್ಥಳವಾಗಿತ್ತು. ಮಹಾಭಾರತ ಕಾಲದಲ್ಲಿ ಈ ಸ್ಥಳವನ್ನು ಅಸ್ತ್ರಾಲಯ ಎಂದು ಕರೆಯಲಾಗುತ್ತಿತ್ತು. ಇದು ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ನೈಜ ಕಾರಣ ಎಂದು ಮಾರ್ಕಂಡೇಯ ಕಾಟ್ಜು ಟ್ವೀಟ್ ಮಾಡಿದ್ದಾರೆ.‌

ಈ ಟ್ವೀಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಈ ರೀತಿಯ ಟ್ವೀಟ್ ಮೂಲಕ ಸೋಲಿನ ನೋವನ್ನು ಮರೆಯಲು ಸಹಾಯ ಮಾಡುತ್ತಿರುವ ಎಲ್ಲರಿಗೂ ಧನ್ಯವಾದ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಈ ವಿಚಾರ ಪ್ರಧಾನಿ ಮೋದಿಗೆ ತಿಳಿದರೆ ಸಾಕು, ಮತ್ತೆ ಅಸ್ತ್ರಾಲಯ ಎಂದು ಮರುನಾಮಕರಣ ಮಾಡುತ್ತಾರೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು