ಮಂಗಳೂರು: ಇಲ್ಲಿನ ಸುಮಾ ಸಧನ ,ಮಲ್ಲಿಕಟ್ಟೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ. ಸುಮತಿ ಎಸ್ ಹೆಗ್ಡೆಯವರಿಂದ ಮಾದರಿ ಮತಪತ್ರ ಬಿಡುಗಡೆ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ರಾಜ್ಯ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಝಮೀರ್ ಶಾ , ಮಾಜಿ ರಾಜ್ಯ ಯುವ ಜನತಾದಳ ಕಾರ್ಯದರ್ಶಿ ಶ್ರೀನಾಥ್ ರೈ, ಮಂಗಳೂರು ದಕ್ಷಿಣ ಜೆಡಿಎಸ್ ಪಧಾಧಿಕಾರಿಗಳಾದ ಇಝಾ ಬಜಾಲ್, ಅಲ್ತಾಫ್ ತುಂಬೆ, ಲತೀಫ್ ಬೆಂಗರೆ, ನಾಸಿರ್ ಬೆಂಗರೆ, ಲತೀಫ್ ಶಿವಭಾಗ್ ,ಶಾರದಾ ಶೆಟ್ಟಿ ಹಾಗು ಹಲವು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.