ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಗೊಳಗಿ, ಬಗದಲ್, ಸಿಕೇಂದ್ರಪೂರ ಸೇರಿದಂತೆ ವಿವಿಧ ಗ್ರಾಮಗಳ ಅನೇಕ ಜನ ಯುವಕರು ಮಾಜಿ ಸಚಿವರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಗುರುವಾರ ಬೆಳಗ್ಗೆ ಜೆಡಿಎಸ್ ಶಾಲು ಹೊದಿಸಿ ಪಕ್ಷದ ಧ್ವಜ ನೀಡುವ ಮೂಲಕ ವಿವಿಧ ಗ್ರಾಮಗಳ ಯುವಕರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಗದಲ್ ನ ನೂರ್ ಅಲಿ ಷಾ, ಮಜೀದ್ ಬೈ, ಮನ್ಸೂರ್, ರಿಯಾಜ್, ಜಾನೋದಿನ್ ಪಟೇಲ್, ಹುಸೇನ್ ಅಲಿ, ಆಶೀಪ್, ಸಿಕೇಂದ್ರಪೂರದ ಭೀಮರಾವ್, ಮೋಹಿಸ್, ಮೈಬೂಬ್, ಖಾಸಿಂ, ಸೈಲಾನಿ, ತುಕ್ಕರಾಮ್, ರುಬೇನಾ, ಜಾಫರ್, ಸಂಗೊಳಗಿಯ ಶರಣು ಜಮಾದಾರ, ಯಾಕೂಬ್ ಬೈ, ಜಬ್ಬರ್ ಸಾಬ್, ಮಲ್ಲಪ್ಪ, ವಿಠಲ್, ಅಕೊಂಳ್, ಕರುಣ್, ಸುನಿಲ್, ಪಾದಪ್ಪ, ಮಲ್ಲು, ರಾಜಪ್ಪ, ರಾಮಕೃಷ್ಣ, ಬಾಬುರಾವ್, ಜಲೀಲ್ ಸೇರಿದಂತೆ ಅನೇಕರಿದ್ದರು.