ಕಾವೂರು: ಇಲ್ಲಿನ ಕುಂಜತ್ತ ಬೈಲು 13ನೇ ವಾರ್ಡ್ನ ಬಸವನಗರದಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಬಸವೇಶ್ವರ ಸಮುದಾಯ ಭವನವನ್ನು ಶಾಸಕರಾದ ಡಾಕ್ಟರ್ ಭರತ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಶ್ರೀ ಬಸವೇಶ್ವರ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡರು.
ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರಾದ ಶರತ್ ಕುಮಾರ್, ಬಸವೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಗುರುರಾಜ ಪಾಟೀಲ್, ಉದ್ಯಮಿ ಚಂದನ್ ದಾಸ್ ಸುವರ್ಣ, ಸಾಹಿತಿ ಬದ್ರುದ್ದೀನ್ ಕೂಳೂರು, ಹಿರಿಯರಾದ ಜಿ.ಬಿ ಪಾಟೀಲ, ಎಲ್ಲಪ್ಪ ಲಕ್ಕುಂಡಿ, ಮಲ್ಲಪ್ಪ ಸಂಗಳದ, ಕೆ ಆರ್ ಹಲಗಿ ಮತ್ತಿತರರು ಉಪಸ್ಥಿತರಿದ್ದರು.