ಚೆನ್ನೈ: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಉದಯನಿಧಿ ಅವರ ಸನಾತನ ಧರ್ಮಯುದ್ಧ ಭುಗಿಲೆದ್ದಿರುವಾಗಲೇ ಡಿಎಂಕೆ ಪಕ್ಷದ ಮತ್ತೊಬ್ಬ ನಾಯಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಸನಾತನ ಧರ್ಮವನ್ನು ಏಡ್ಸ್ ಮತ್ತು ಕುಷ್ಠರೋಗದಂತಹ ಸಾಮಾಜಿಕ ಪಿಡುಗುಗಳಿಗೆ ಹೋಲಿಸಿದ್ದಾರೆ.
ಸನಾತನ ಧರ್ಮ ವಿವಾದವನ್ನು ಡಿಎಂಕೆ ನಾಯಕರು ಇವತ್ತು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸನಾತನ ಧರ್ಮವನ್ನು ಕುಷ್ಠರೋಗ ಮತ್ತು ಏಡ್ಸ್ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಡಿಎಂಕೆ ನಾಯಕ ಎ.ರಾಜಾ ಹೋಲಿಸಿದ್ದಾರೆ. ಕುಷ್ಠರೋಗ, ಏಡ್ಸ್ ಅನ್ನು ಹೇಗೆ ನಿರ್ಮೂಲನೆ ಮಾಡಬೇಕೋ ಹಾಗೇ ಸನಾತನದ ಧರ್ಮದ ವಿಷಯಗಳನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಈಗ ಈ ವಿಚಾರವಾಗಿ ಮತ್ತಷ್ಟು ಚರ್ಚೆಗಳು ಭುಗಿಲೆದ್ದಿವೆ.