ಮಂಗಳೂರು: ನಗರದ ಹೊರವಲಯದ ಮಳ್ಳೂರು ಸಮೀಪದ ಉಳಾಯಿಬೆಟ್ಟು ಬದ್ರಿಯಾ ನಗರದಲ್ಲಿ ಭಾನುವಾರ ಸಂಜೆ ಈಜಲು ಕಲ್ಲಿನ ಕ್ವಾರಿಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜೋಕಟ್ಟೆಯ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ರಿ ಶಿಯಾಜ್ 19 ಮೃತಪಟ್ಟ ಯುವಕ ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ ಶಿಯಾಜ್ ಉಳಾಯಿಬೆಟ್ಟು ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು ಸಂಜೆ ವೇಳೆಗೆ ತನ್ನ ಸ್ನೇಹಿತರೊಂದಿಗೆ ಬದ್ರಿಯನಗರ ಪೆರ್ಮಂಕಿಯ ಕಾಯರ ಪದವಿನಲ್ಲಿರುವ ಕಲ್ಲಿನ ಕ್ವಾರಿಗೆ ಹೊಂಡದಲ್ಲಿ ತುಂಬಿದ ನೀರಲ್ಲಿ ಈಜಲು ಹೋಗಿದ್ದಾರೆ.
ಈ ಸಂದರ್ಭ ನದಿಯ ಆಳ ತಿಳಿಯಲಾಗದೆ ಈಜಲು ಮುಂದಾದಾಗ ನೀರಿನಲ್ಲಿ ಮುಳುಗಿದರು ಎಂದು ಪೊಲೀಸರು ತಿಳಿಸಿದ್ದಾರೆ . ತಕ್ಷಣ ಸ್ನೇಹಿತರು ಶಿಯಾಜ್ನ ನ್ನು ರಕ್ಷಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.