ಮಂಗಳೂರು, ಜು.14: ಭಾರೀ ಗಾಳಿಗೆ ಹೊಟೇಲ್ ವೊಂದರ ಕಬ್ಬಿಣದ ಛಾವಣಿ ಕುಸಿದು ತಗಡಿನ ಶೀಟು ಹಾರಿ ಆರು ಕಾರುಗಳಿಗೆ ಹಾನಿಯಾದ ಘಟನೆ ಮಂಗಳೂರಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೋಟೆಲ್ ನ ಪಾರ್ಕಿಂಗ್ ಜಾಗದ ಎದುರಿನ ತಗಡಿನ ಶೀಟು ಬಿದ್ದು ಕಾರುಗಳಿಗೆ ಹಾನಿಯಾಗಿದೆ.
ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಶೀಟು ಹಾರಿ ಬಿದ್ದಿದೆ. ಅಲ್ಲಿ ನಿಲ್ಲಿಸಿದ್ದ ಆರು ಕಾರುಗಳಿಗೆ ಹಾನಿಯಾಗಿದೆ. ಆದರೆ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.