News Karnataka Kannada
Wednesday, May 15 2024
ಮಂಗಳೂರು

ಮಂಗಳೂರು: ನ.6 ಯೂತ್ ಸೆಂಟರ್ (ರಿ) ವತಿಯಿಂದ 2022ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವಾಭಿವಂದನೆ

Photo Credit : By Author

ಮಂಗಳೂರು: ಯೂತ್ ಸೆಂಟರ್(ರಿ) ಪಡೀಲ್ ನ ಕಳೆದ 54 ವರ್ಷಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಸಮಾಜಮುಖಿ ಸಾಧನೆಗಳಿಗಾಗಿ 2022 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಈ ಸಂದರ್ಭದಲ್ಲಿ ತಮ್ಮ ಮಾತೃ ಸಂಘ ವನ್ನು ಅಭಿನಂದಿಸುತ್ತಾ, ಗೌರವಾಭಿವಂದನೆ ಕಾರ್ಯಕ್ರಮವನ್ನು ನ.6 ರಂದು ಸಂಜೆ 03:30 ಗಂಟೆಗೆ ಕ್ಲಬ್ಬಿನ ಆವರಣದಲ್ಲಿ ಯೂತ್ ಸೆಂಟರ್ ಮಹಿಳಾ ಮಂಡಲ, ಯೂಸ್ ಸೆಂಟರ್ ನ ಯಕ್ಷಗಾನ ನೃತ್ಯ ಕಲಿಕಾ ಶಿಬಿರದ ಮಕ್ಕಳು ಮತ್ತು ಪೋಷಕರು, ಯೂತ್ ಸೆಂಟರ್ ಭಜನಾ ಕಲಿಕಾ ಶಿಬಿರದ ಮಕ್ಕಳು ಮತ್ತು ಪೋಷಕರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಹಿತೈಷಿಗಳು ಹಮ್ಮಿಕೊಂಡಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ಅಣ್ಣಯ್ಯ ಕುಲಾಲ್, ಡಾಕ್ಟರ್ ದೇವರಾಜು ಅರಸ್ ಪ್ರಶಸ್ತಿ ಪುರಸ್ಕೃತರು, ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ  ವಿಜಯಕುಮಾರ್ ಶೆಟ್ಟಿ, ಅಧ್ಯಕ್ಷರು, ಬಿಜೆಪಿ ದಕ್ಷಿಣ ಮಂಡಲ,  ದಿಲ್ ರಾಜ್ ಆಳ್ವ, ನಿರ್ದೇಶಕರು, ಮಂಗಳಾ ರಿಸೋರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಹಾಗೂ ಸಂಚಾಲಕರು, ಸ್ವಚ್ಛ ಮಂಗಳೂರು ಫೌಂಡೇಶನ್,  ರಾಜ ಕೆ ಕೋಟ್ಯಾನ್, ಗೌರವಾಧ್ಯಕ್ಷರು, ಯೂತ್ ಸೆಂಟರ್ (ರಿ) ಪಡೀಲ್ ಯೂತ್ ಸೆಂಟರ್ ಮಹಿಳಾ ಮಂಡಲ,  ಉದಯ್ ಕೆ ಪಿ, ಅಧ್ಯಕ್ಷರು, ಯೂತ್ ಸೆಂಟರ್ (ರಿ) ಪಡೀಲ್, ಯೂತ್ ಸೆಂಟರ್ ಮಹಿಳಾ ಮಂಡಲ ಇವರು ವಹಿಸಲಿದ್ದು, ಈ ಸಂದರ್ಭದಲ್ಲಿ  ಅಣ್ಣಯ್ಯ ಕುಲಾಲ್ ಇವರನ್ನು ಕ್ಲಬ್ಬಿನ ವತಿಯಿಂದ ಸನ್ಮಾನಿಸ ಲಾಗುವುದೆಂದು ಮತ್ತು ಇತ್ತೀಚೆಗೆ ಮಹಿಷ ವಧೆ ಎಂಬ ಪ್ರಸಂಗವನ್ನು ಯಶಸ್ವಿಯಾಗಿ ಆಡಿ ತೋರಿಸಿದ ಯೂತ್ ಸೆಂಟರ್ ನ ಯಕ್ಷಗಾನ ನೃತ್ಯ ಕಲಿಕಾ ಶಿಬಿರದ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡುವುದು ಹಾಗೂ ಯೂತ್ ಸೆಂಟರ್ ನ ಭಜನಾ ಕಲಿಕಾ ಶಿಬಿರದ ಮಕ್ಕಳು ಪ್ರಪ್ರಥಮವಾಗಿ ನೃತ್ಯ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಬಹುಮಾನವನ್ನು ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿರುವುದಾಗಿ ಕ್ಲಬ್ಬಿನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು